Advertisement

ಕಾರು ಪಲ್ಟಿ: ಮೂವರು ಸಾವು

11:28 PM Aug 15, 2019 | Team Udayavani |

ಬ್ಯಾಡಗಿ: ರಸ್ತೆ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ, ಮೂವರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಕೋಟೆಗುಡ್ಡದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಮೃತರನ್ನು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬೆಣಗಲ್‌ ಗ್ರಾಮದ ಕೊಟ್ರೇಶ್‌ ಸಿದ್ರಾಮಪ್ಪ (45), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಪಿ.ಎಸ್‌.ಸತೀಶಕುಮಾರ (32), ದಾವಣಗೆರೆ ನಿಟ್ಟುವಳ್ಳಿಯ ಎಸ್‌.ಕೆ.ಆನಂದಕುಮಾರ್‌ (38) ಎಂದು ಗುರುತಿಸಲಾಗಿದೆ. ಇವರೆಲ್ಲಾ ಇಂಡಸ್‌ಮನಿ ಗೋಲ್ಡ್‌ ಲೋನ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ದುರ್ಘ‌ಟನೆ ಯಲ್ಲಿ ಕೊಟ್ರೇಶ್‌ ಸ್ಥಳದಲ್ಲೇ ಅಸುನೀಗಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸತೀಶ್‌ ಕುಮಾರ್‌ನನ್ನು ರಾಣಿಬೆನ್ನೂರ ಸರ್ಕಾರಿ ಆಸ್ಪತ್ರೆ, ಚಾಲಕ ಆನಂದಕುಮಾರ ಅವರನ್ನು ದಾವಣಗೆರೆ ಎಸ್‌.ಎಸ್‌.ಆಸ್ಪತ್ರೆಗೆ ದಾಖಲಿಸ ಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ದಾವಣಗೆರೆ ವಿದ್ಯಾನಗರದ ಬಿ.ಎಸ್‌. ಪ್ರದೀಪ್‌ ಅವರನ್ನು ಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರೂ ಕಂಪನಿ ಕೆಲಸದ ನಿಮಿತ್ತ ದಾವಣಗೆರೆಯಿಂದ ಗೋವಾಕ್ಕೆ ಫೋರ್ಡ್‌ ಇಕೋ ನ್ಪೋರ್ಟ್‌ ಕಾರಿನಲ್ಲಿ ತೆರಳುತ್ತಿದ್ದರು. ಕೋಟೆಗುಡ್ಡದ ಬಳಿಯ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿದ್ದರಿಂದ ದುರ್ಘ‌ಟನೆ ನಡೆದಿದೆ. ಈ ಸಂಬಂಧ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next