Advertisement

Mudbidri: ಕಾರು ಢಿಕ್ಕಿ; ಸೈಕಲ್‌ ಸವಾರ ಸಾವು

10:32 PM Jul 27, 2024 | Team Udayavani |

ಮೂಡುಬಿದಿರೆ: ಕೆಲವು ದಶಕಗಳಿಂದ ಮೂಡುಬಿದಿರೆಯ ವಾರದ ಸಂತೆಯಲ್ಲಿ ಚಕ್ಕುಲಿ ಮತ್ತಿತರ ಕರಿದ ತಿಂಡಿ, ಸೋಜಿ ಮೊದಲಾದ ಪಾನೀಯ ಮಾರಾಟ ಮಾಡುತ್ತಿದ್ದ ಪುತ್ತಿಗೆ ಪದವು ಹಂಡೇಲು ನಿವಾಸಿ ರಮೇಶ ಅಂಚನ್‌ (65) ಶುಕ್ರವಾರ ಹಂಡೇಲು ಮಸೀದಿ ಬಳಿ ತನ್ನ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

Advertisement

ತೀವ್ರ ಗಾಯಗೊಂಡ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತ ಪಟ್ಟಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಮಾರುಕಟ್ಟೆ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರವಾದ ಬಳಿಕ ಅವರು ಪುತ್ತಿಗೆ ಪಂಚಾಯತ್‌ನ ಪಂಪ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು 18 ಬಾರಿ ಶಬರಿಮಲೆ ಯಾತ್ರೆಯನ್ನು ಕೈಗೊಂಡಿದ್ದು ಗುರುಸ್ವಾಮಿಯಾಗಿಯೂ ಹಲವರಿಗೆ ಮಾರ್ಗದರ್ಶನ ನೀಡಿದ್ದರು. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next