Advertisement

ಮರಕ್ಕೆ ಕಾರು ಡಿಕ್ಕಿ; ಮೂವರ ಸಾವು

10:56 PM Mar 08, 2020 | Team Udayavani |

ಸಾಗರ(ಶಿವಮೊಗ್ಗ): ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಕಾಸ್ಪಾಡಿ ತಿರುವಿನಲ್ಲಿ ಶನಿವಾರ ತಡರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಯಚೂರಿನ ಶಕ್ತಿ ನಗರದ ಥರ್ಮಲ್‌ ವಿದ್ಯುತ್‌ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ (40), ವೆಂಕಟೇಶ್‌ (52) ಹಾಗೂ ನಿವೃತ್ತ ನೌಕರ ತಿಪ್ಪಣ್ಣ (61) ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಗರಾಜ್‌ ಎಂಬುವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈ ನಾಲ್ವರು ಜೋಗದ ಕೆಪಿಸಿಸಿ ಉದ್ಯೋಗಿಯೊಬ್ಬರ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಂಡೈ ಕಾರಿನಲ್ಲಿ ರಾಯಚೂರಿನಿಂದ ಹೊರಟಿದ್ದರು. ಶನಿವಾರ ತಡರಾತ್ರಿ ಕಾಸ್ಪಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಈ ದುರ್ಘ‌ಟನೆ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next