Advertisement

Accident: ಕಾರು-ಬೈಕ್‌ ಢಿಕ್ಕಿ: ಗಾಯ

12:58 AM Sep 13, 2023 | Team Udayavani |

ಸುಳ್ಯ: ಕಾರೊಂದು ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕನಕಮಜಲಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ.

Advertisement

ಸುಳ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಸುಳ್ಯದಲ್ಲಿ ಪಿಜಿಯಲ್ಲಿ ವಾಸವಿರುವ ಕೆವಿಜಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಚೈತನ್ಯ ಅವರ ಬೈಕ್‌ಗೆ ಕನಕಮಜಲು ಗ್ರಾ.ಪಂ. ಬಳಿ ಢಿಕ್ಕಿ ಹೊಡೆಯಿತು. ಚೈತನ್ಯ ಅವರನ್ನ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next