Advertisement

ಪಂಜಾಬ್ ಸಿಂಗ್ ದ್ವಯರ ವೈಮನಸ್ಸಿಗೆ ಕಾಂಗ್ರೆಸ್ ಹೈಕಮಾಂಡ್ ಮುಲಾಮು..!

03:25 PM Jul 15, 2021 | Team Udayavani |

ನವ ದೆಹಲಿ : ಪಂಜಾಬ್ ಕಾಂಗ್ರೆಸ್ ನಲ್ಲಿ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಕಾಂಗ್ರೆಸ್ ಹೈಕಮಾಂಡ್ ಒಂದು ತಾರ್ಕಿಕ ಅಂತ್ಯ ಹಾಡಲು ಮುಂದಾಗಿದೆ. ಮುಖ್ಯಮಂತ್ರಿ ಕ್ಯಾಪ್ಟನ್  ಅಮರಿಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ಅವರ ನಡುವಿನ ವೈಮನಸ್ಸಿಗೆ ಮುಲಾಮು ಹಚ್ಚುವ ಕಾರ್ಯವನ್ನು ರಾಷ್ಟ್ರೀಯ ಕಾಂಗ್ರೆಸ್ ಮಾಡಲು ಹೊರಟಿದೆ.

Advertisement

ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿಯೇ ಮುಂದುವರಿಸಿ, ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಜಾಲಿ ರೈಡ್‌ಗಾಗಿ ಬೈಕ್‌ ಕದಿಯುತ್ತಿದ್ದವರ ಸೆರೆ: 38 ಲಕ್ಷ ರೂ. ಮೌಲ್ಯದ 58 ವಾಹನ ವಶ

ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಿಸಿಸಿ(ಪಂಜಾಬ್ ಕಾಂಗ್ರೆಸ್ ಕಮಿಟಿ) ಮುಖ್ಯಸ್ಥರಾಗಿ ನವಜೋತ್ ಸಿಂಗ್ ಸಿಧು ಅವರುನ್ನು ನೇಮಿಸಿವುದಕ್ಕೆ ಮುಂದಾಗಿದ್ದು, ಮಾತ್ರವಲ್ಲದೆ, ಪಂಜಾಬ್ ಕಾಂಗ್ರೆಸ್ ಹಿಂದೂ ಮತ್ತು ದಲಿತ ಸಮುದಾಯಗಳ ಇಬ್ಬರು ಕಾರ್ಯಕಾರಿ ಅಧ್ಯಕ್ಷರನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ.

ಈ ಕುರಿತಾಗಿ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಇಂಡಿಯಾ ಟುಡೆಯೊಂದಿಬಗೆ ಮಾತನಾಡಿ, ಇನ್ನೆರಡು ಮೂರು ದಿನಗಳಲ್ಲಿ ಈ ಕುರಿತಾದ ಅಂತಿಮ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಬರಲಿದೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

Advertisement

ಬರುವ ವಿಧಾನ ಸಭಾ ಚುನಾವಣೆಯನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ. ಸಿಧು ಗೆ ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷಗಿರಿಯನ್ನು ನೀಡುವುದಕ್ಕೆ ಪಕ್ಷ ತೀರ್ಮಾನಕ್ಕೆ ಬಂದಿದೆ. ಅಧಿಕೃತ ಘೋಷಣೆಯನ್ನು ಎರಡು ಮೂರು ದಿನಗಳಲ್ಲಿ ಪಕ್ಷ ಮಾಡಲಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : SSLC ಪರೀಕ್ಷೆ ಈ ಬಾರಿ ಒತ್ತಡ ಸಿಹಿಯಾಗಿದೆ – ಡಾ. ಅಶೋಕ ಕಾಮತ್

Advertisement

Udayavani is now on Telegram. Click here to join our channel and stay updated with the latest news.

Next