Advertisement

ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಲಾರೆ: ನಾರಾಯಣ ಸ್ವಾಮಿ

11:35 PM Mar 13, 2024 | Team Udayavani |

ಚಿತ್ರದುರ್ಗ: ಓಲೈಕೆ, ಪಕ್ಷಾಂತರ, ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಬಾರದು ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

Advertisement

ಒಂದು ವೇಳೆ ಟಿಕೆಟ್‌ ಕೈತಪ್ಪಿದರೆ ಕಾಂಗ್ರೆಸ್‌ ಸೇರುತ್ತೀರಾ ಎಂಬ ಪ್ರಶ್ನೆಗೆ ಗರಂ ಆದರು. ಬಿಜೆಪಿ ತಳಹದಿಯಲ್ಲಿ ನಾರಾಯಣ ಸ್ವಾಮಿಯ ಬೆವರಿನ ಹನಿಯಿದೆ ಎಂದು ಹೇಳಿದರು.

ಚಿತ್ರದುರ್ಗ ಕ್ಷೇತ್ರದ ಟಿಕೆಟ್‌ ಯಾವಾಗ ಘೋಷಣೆಯಾಗಲಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದೇಶದ ಪ್ರಧಾನಿಯನ್ನೂ ಒಳಗೊಂಡಂತೆ ಸಂಸದೀಯ ಮಂಡಳಿ ಟಿಕೆಟ್‌ ಬಗ್ಗೆ ತೀರ್ಮಾನಿಸುತ್ತದೆ.

ಒಂದೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗಬಹುದು. ಈ ತೀರ್ಮಾನಕ್ಕಾಗಿ ಪ್ರತಿಯೊಬ್ಬರೂ ಕುತೂಹಲದಿಂದ ಕಾಯುತ್ತಿದ್ದಾರೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next