Advertisement

ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ನಿರ್ಲಕ್ಷಿಸಲಾಗದು, ಆದರೆ..: ಶರದ್ ಪವಾರ್ ಅಭಿಮತ

09:43 AM Apr 02, 2023 | Team Udayavani |

ನಾಗ್ಪುರ: ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹಿಂದುತ್ವವಾದಿ ವಿ.ಡಿ ಸಾವರ್ಕರ್ ಅವರ ತ್ಯಾಗವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಅವರ ಮೇಲಿನ ಭಿನ್ನಾಭಿಪ್ರಾಯಗಳನ್ನು ಇಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ನಾವಿಂದು ಗಮನ ಹರಿಸಲು ಹಲವು ವಿಚಾರಗಳಿವೆ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

Advertisement

ವಿದೇಶಿ ನೆಲದಲ್ಲಿ ಭಾರತದ ಸಮಸ್ಯೆಗಳ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡ ಅವರು, ವಿದೇಶದಲ್ಲಿ ಭಾರತೀಯರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಇದೇ ಮೊದಲಲ್ಲ ಎಂದರು.

ನಾಗ್ಪುರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಪವಾರ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನೆಗೆ ಭೇಟಿ ನೀಡಿದರು.

ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯೊಂದಿಗೆ ಮಾತನಾಡಿದ್ದೀರಾ ಮತ್ತು ಸಾವರ್ಕರ್ ಸಿದ್ದಾಂತದ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ಟೀಕೆಯನ್ನು ಕಡಿಮೆಗೊಳಿಸುತ್ತಾರೆಯೇ ಎಂಬ ಪ್ರಶ್ನೆಗೆ ಪವಾರ್, 18-20 ರಾಜಕೀಯ ಪಕ್ಷಗಳ ನಾಯಕರು ಇತ್ತೀಚೆಗೆ ಕುಳಿತು ದೇಶದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿದರು.

“ಅಧಿಕಾರದಲ್ಲಿರುವವರು ದೇಶವನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದರ ಕುರಿತು ನಾವು ಉದ್ದೇಶಪೂರ್ವಕವಾಗಿ ಚರ್ಚಿಸುವ ಅವಶ್ಯಕತೆಯಿದೆ ಎಂದು ನಾನು ಸಲಹೆ ನೀಡಿದ್ದೇನೆ” ಎಂದು ಪವಾರ್ ಹೇಳಿದರು.

Advertisement

ಇದನ್ನೂ ಓದಿ:ನೀಲಿ ಚಿತ್ರದಲ್ಲಿ ನಟಿಸ್ತೀರಾ? ಸಂದರ್ಶನದಲ್ಲಿ ಕನ್ನಡದ ನಟಿಗೆ ಯೂಟ್ಯೂಬರ್‌ ಪ್ರಶ್ನೆ

ರಾಹುಲ್ ಗಾಂಧಿ ಪದೇ ಪದೇ ಸಾವರ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅವರ ಗೌರವಾರ್ಥ ಸಾವರ್ಕರ್ ಗೌರವ್ ಯಾತ್ರೆಯನ್ನೂ ಆಯೋಜಿಸುತ್ತಿದೆ.

‘ಇಂದು ಸಾವರ್ಕರ್ ರಾಷ್ಟ್ರೀಯ ವಿಚಾರವಲ್ಲ, ಹಳೆಯ ವಿಷಯ. ನಾವು ಸಾವರ್ಕರ್ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದೆವು ಆದರೆ ಅದು ವೈಯಕ್ತಿಕವಲ್ಲ. ಅದು ಹಿಂದೂ ಮಹಾಸಭೆಯ ವಿರುದ್ಧವಾಗಿತ್ತು. ಆದರೆ ಅದರ ಇನ್ನೊಂದು ಮುಖವೂ ಇದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಮಾಡಿದ ತ್ಯಾಗವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next