Advertisement

ಗಾಂಜಾ ಸೇವನೆ: 5 ವಿದ್ಯಾರ್ಥಿಗಳು ವಶಕ್ಕೆ

08:51 PM Mar 23, 2023 | Team Udayavani |

ಉಡುಪಿ: ಮಣಿಪಾಲದ ಅಪಾರ್ಟ್‌ಮೆಂಟೊಂದರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ ಆರೋಪದಲ್ಲಿ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Advertisement

ನಿಖೀಲ್‌ ಎಂ. (22), ತನ್ವೀರ್‌ ರೆಡ್ಡಿ (25), ಶರಣ್‌ ಶೆಟ್ಟಿ (22), ರಾಹುಲ್‌ ಸೀಮಾ (21) ಹಾಗೂ ತುಷಾರ್‌ ಜಿ. (21) ಬಂಧಿತರು.

ಮಣಿಪಾಲ ಪೊಲೀಸ್‌ ಠಾಣೆ ಉಪ ನಿರೀಕ್ಷಕ ನವೀನ್‌ ನಾಯ್ಕ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಗಾಂಜಾವನ್ನು ಸೇವಿಸಿರುವ ಆರೋಪದಲ್ಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಫಾರೆನ್ಸಿಕ್‌ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲಿ ಗಾಂಜಾ ಸೇವನೆ ಧೃಡಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next