Advertisement

ಗಾಂಜಾ ಪ್ರಕರಣ: ಮೂವರ ಸೆರೆ

03:17 PM Nov 28, 2017 | |

ಉಳ್ಳಾಲ: ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮತ್ತು ಗಾಂಜಾ ಸೇದುತ್ತಿದ್ದ ಮೂವರನ್ನು  ಕೊಣಾಜೆ ಠಾಣಾ ಇನ್ಸ್‌ಪೆಕ್ಟರ್‌ ಅಶೋಕ್‌ ನೇತತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಳ್ಮ ಗ್ರಾಮದ ಬೆಳ್ಮದೋಟ ಬಳಿ ಸ್ಥಳೀಯರಿಗೆ ಗಾಂಜಾ ಮಾರಾಟ ಮಾಡಲು ಕೊಂಡುಹೋಗುತ್ತಿದ್ದ ಬೆಳ್ಮ ರೆಂಜಾಡಿ ನಿವಾಸಿ ಯು.ಎಂ. ಅನ್ಸಾರ್‌ ಬಂಧಿತ ನಾಗಿದ್ದು, ಆತನ ಕೈಯಲ್ಲಿದ್ದ 1 ಕೆ.ಜಿ  100 ಗ್ರಾಂ ತೂಕದ ಸಣ್ಣ ಗಾಂಜಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ಗ್ರೀನ್‌ ಗ್ರೌಂಡ್‌ ಬಳಿ ಗಾಂಜಾ ಸೇದುತ್ತಿದ್ದ ಕಸ್ಬಾ ಬೆಂಗ್ರೆ ನಿವಾಸಿಗಳಾದ ಮಹಮ್ಮದ್‌ ಅಶ್ರಫ್‌ ಮತ್ತು ಮಹಮ್ಮದ್‌ರನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ದೃಢಪಟ್ಟಿದೆ.

ಈ ಕಾರ್ಯಾಚರಣೆಯನ್ನು ಪೊಲೀಸ್‌ ಆಯುಕ್ತ ಸುರೇಶ್‌, ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಉಮಾ ಪ್ರಶಾಂತ್‌ ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ರಾಮರಾವ್‌ ನೇತೃತ್ವದಲ್ಲಿ ಕೊಣಾಜೆ ಪೊಲೀಸ್‌ ನಿರೀಕ್ಷಕ ಅಶೋಕ್‌, ಪಿ.ಎಸ್‌.ಐ. ರವಿ ಪೀರು ಪವಾರ್‌ ಮತ್ತು ವೆಂಕಟೇಶ್‌, ಸಿಬಂದಿಗಳಾದ ಅಶೋಕ್‌, ನಾಗರಾಜ್‌, ಭಾಸ್ಕರ್‌, ವಿಜಯ್‌, ಕರಣಸಿದ್ದ ಒಡೆಯರ್‌, ಗಿರೀಶ್‌ ನಡೆಸಿದ್ದಾರೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next