Advertisement

ಅಭ್ಯರ್ಥಿ ಆಯ್ಕೆ : 2ನೇ ಪಟ್ಟಿಗೆ ಕಾಂಗ್ರೆಸ್‌ ಕಸರತ್ತು

02:04 AM Mar 08, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮ ಗೊಳಿಸಲು ಆಯ್ಕೆ ಸಮಿತಿ ಕಸರತ್ತು ಆರಂಭಿಸಿದೆ.

Advertisement

ಮಂಗಳವಾರದ ಸಭೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಮೋಹನ್‌ ಪ್ರಕಾಶ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್‌ ಭಾಗವಹಿಸಿದ್ದರು.

ತಡರಾತ್ರಿಯವರೆಗೆ ಚರ್ಚೆ ನಡೆಸಿದ ಸಮಿತಿ, ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಲ್ಲಿ ಒಂದೊಂದೇ ಹೆಸರು ಅಂತಿಮ ಗೊಳಿಸಿದ್ದು, 4 ಹಾಗೂ 3 ಹೆಸರಿರುವ 85 ಕ್ಷೇತ್ರ ಗಳಲ್ಲಿ 2 ಹೆಸರುಗಳಿಗೆ ಇಳಿಸಲು ಕಸರತ್ತು ನಡೆಸಿತು. 25 ಕ್ಷೇತ್ರ ಗಳಲ್ಲಿ ಪ್ರಬಲ ಆಕಾಂಕ್ಷಿಗಳು ಇರುವ ಕಾರಣ ಹಲವು ಸುತ್ತಿನ ಸಮಾಲೋಚನೆ ನಡೆಯಿತು ಎನ್ನಲಾಗಿದೆ. ಬುಧವಾರವೂ ಸಮಿತಿ ಸಭೆ ನಡೆಸಲಿದೆ. ಸಭೆಯಲ್ಲಿ ವಿ. ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರಿಸಿ ಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next