Advertisement

ಗಂಗಾವತಿ: ನಿಯಮ ಉಲ್ಲಂಘಿಸಿದ ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು

07:40 PM Apr 20, 2023 | Team Udayavani |

ಗಂಗಾವತಿ: ಕೃಷಿ ಇಲಾಖೆಯ ನಿಯಮ ಉಲ್ಲಂಘಿಸಿದ ನಗರದ ಶ್ರೀದೀಪ್ ಟ್ರೇಡಿಂಗ್ ಕಂಪನಿ ಹಾಗೂ ಶ್ರೀ ಸಂದೀಪ್ ಆಗ್ರೋ ಏಜೆನ್ಸಿ ಚಿಲ್ಲರೆ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಗೊಳಿಸಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಆದೇಶ ಹೊರಡಿಸಿದ್ದಾರೆ.

Advertisement

ಕೃಷಿ ಇಲಾಖೆಯಿಂದ ಒಬ್ಬ ವ್ಯಕ್ತಿ ಅರ್ಹತಾ ಪ್ರಮಾಣ ಸಲ್ಲಿಸಿ ವಿವಿಧಡೆ ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಿಗೆ ಪಡೆದು ನಿಯಮ ಉಲ್ಲಂಘನೆ ಕುರಿತು ಕಾರಣ ಕೇಳುವ ನೋಟಿಸ್‌ಗೆ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ನಗರದ ಶ್ರೀದೀಪ್ ಟ್ರೇಡಿಂಗ್ ಕಂಪನಿ ಹಾಗೂ ಶ್ರೀ ಸಂದೀಪ್ ಆಗ್ರೋ ಏಜೆನ್ಸಿ ಎಂಬ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿನೆ ಸೂಕ್ತ ಸಮಜಾಯಿಸಿ ಇಲ್ಲದ ಕಾರಣ ಎರಡು ಅಂಗಡಿಗಳ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ರಸಗೊಬ್ಬರ ನಿಯಂತ್ರ ಆದೇಶ, ೧೯೮೫ ರ ನಿಯಮ ೩೧ರ ಅನ್ವಯ ಸದರಿ ಚಿಲ್ಲರೆ ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದುಗೊಳಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: IPL ಸಿರಾಜ್ ಬಿಗು ದಾಳಿ; ಪಂಜಾಬ್ ವಿರುದ್ಧ ಜಯದ ನಗೆ ಬೀರಿದ ಕೊಹ್ಲಿ ಬಳಗ

Advertisement

Udayavani is now on Telegram. Click here to join our channel and stay updated with the latest news.

Next