Advertisement

ಕೆನಡಾ; ಮತ್ತೊಮ್ಮೆ ನಿಜ್ಜರ್‌ ಹತ್ಯೆ ಪ್ರಸ್ತಾವಿಸಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ

02:01 AM Apr 12, 2024 | Team Udayavani |

ಒಟ್ಟಾವಾ: ಕಳೆದ ವರ್ಷ ಕೆನಡಾದಲ್ಲಿ ನಡೆದ ಖಲಿಸ್ಥಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಮತ್ತೊಮ್ಮೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಆಕ್ಷೇಪ ಎತ್ತಿದ್ದು, ಎಲ್ಲ ಕೆನಡಿಯನ್ನರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Advertisement

ಕೆನಡಾ ಚುನಾವಣ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪ ಕುರಿತು ಉನ್ನತ ಮಟ್ಟದ ಸಾರ್ವಜನಿಕ ವಿಚಾರಣೆಯಲ್ಲಿ ಸಾಕ್ಷಿಯಾಗಿ ಮಾತನಾಡಿದ ಜಸ್ಟಿನ್‌, ಭಾರತ ಸರಕಾರದೊಂದಿಗೆ ಹಿಂದಿನ ಕೆನಡಾ ಸರಕಾರಗಳು “ಸ್ನೇಹ’ದಿಂದಿದ್ದವು ಎಂದಿದ್ದಾ ರೆ. 2019 ಮತ್ತು 2021ರ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ಕುರಿತು ಗುಪ್ತಚರ ಮಾಹಿತಿ ದೊರೆತ ಅನಂತರ ತಮ್ಮ ಸರಕಾರ ಏನು ಮಾಡಿತು ಎಂಬ ಪ್ರಶ್ನೆಗೆ ಟ್ರಾಡೊ ಈ ಉತ್ತರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next