Advertisement

ಪಾಕ್‌ ಗಡಿ ಪ್ರದೇಶಗಳಿಗೆ ತೆರಳದಂತೆ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

12:24 PM Sep 30, 2022 | Team Udayavani |

ಒಟ್ಟಾವಾ: ಪಾಕಿಸ್ತಾನದ ಗಡಿಯಲ್ಲಿರುವ ಭಾರತದ ಪ್ರದೇಶಗಳಿಗೆ ತೆರಳದಂತೆ ತನ್ನ ದೇಶದ ಪ್ರಜೆಗಳಿಗೆ ಕೆನಡಾ ಎಚ್ಚರಿಸಿದೆ.

Advertisement

“ನೆಲಬಾಂಬುಗಳು ಮತ್ತು ಅನೀರಿಕ್ಷಿತ ಭದ್ರತಾ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗಡಿಯಿಂದ 10 ಕಿ.ಮೀ. ವ್ಯಾಪ್ತಿಯ ಗುಜರಾತ್‌, ಪಂಜಾಬ್‌ ಮತ್ತು ರಾಜಸ್ಥಾನದ ಪ್ರದೇಶಗಳಿಗೆ ಭೇಟಿ ನೀಡದಿರಿ,’ ಎಂದು ಕೆನಡಾ ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.

ಅಲ್ಲದೇ ಉಗ್ರ ದಾಳಿಯ ಭೀತಿ ಹಿನ್ನೆಲೆಯಲ್ಲಿ ಅಸ್ಸಾಂ ಮತ್ತು ಮಣಿಪುರಕ್ಕೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ತನ್ನ ಪ್ರಜೆಗಳಿಗೆ ಕೆನಡಾ ಸಲಹೆ ನೀಡಿದೆ. ಈ ಕುರಿತು ಕೆನಡಾ ಸರ್ಕಾರದ ವೆಬ್‌ಸೈಟ್‌ನಲ್ಲಿ ಸೆ.27ರಂದು ಎಚ್ಚರಿಕೆ ನೋಟಿಸ್‌ ಹೊರಡಿಸಲಾಗಿದೆ.

ಆದರೆ ಲಡಾಖ್‌ಗೆ ತೆರಳದಂತೆ ತನ್ನ ಪ್ರಜೆಗಳಿಗೆ ಕೆನಡಾ ಯಾವುದೇ ನಿರ್ಬಂಧ ವಿಧಿಸಿಲ್ಲ. ಇನ್ನೊಂದೆಡೆ, ಅಪರಾಧ ಕೃತ್ಯಗಳು ಮತ್ತು ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಕೆನಾಡದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೆ.23ರಂದು ಭಾರತ ಎಚ್ಚರಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next