Advertisement

ನನ್ನ ಶಾಸಕ ಸ್ಥಾನ ಕಿತ್ತು ಹಾಕಲು ಸಾಧ್ಯನಾ? ಸಿಎಂಗೆ ಸುಧಾಕರ್ ಟಾಂಗ್

10:29 AM Mar 06, 2019 | Team Udayavani |

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದ ಜನರಿಗೆ, ಈ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತನ್ನು ಕೊಟ್ಟಿದ್ದರು. ಈ ಮಾತನ್ನು ಒಂದು ಸಲ ಅಲ್ಲ, ನೂರು ಬಾರಿ ಹೇಳುತ್ತೇನೆ. ನನ್ನ ಇನ್ನೇನು ಮಾಡಲು ಸಾಧ್ಯ..ನನ್ನ ಶಾಸಕ ಸ್ಥಾನ ಕಿತ್ತು ಹಾಕಲಿಕ್ಕೆ ಆಗುತ್ತಾ? ನನ್ನ ಆಯ್ಕೆ ಮಾಡಿದ್ದು ಈ ಕ್ಷೇತ್ರ ಜನರು…ಹೀಗೆ ಮುಖ್ಯಮಂತ್ರಿ ಎಚ್ ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಶಾಸಕ ಡಾ.ಸುಧಾಕರ್.

Advertisement

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಸುಧಾಕರ್ ಅವರು, ನಮ್ಮ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ನನ್ನ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದ ಜನರು ನನ್ನ ಗೆಲ್ಲಿಸಿದ್ದಾರೆ. ನನ್ನ ಶಾಸಕ ಸ್ಥಾನ ಕಿತ್ತು ಹಾಕಲು ನಿಮ್ಮ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪುಟಗೋಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಯಾರಿಗೆ ಬೇಕು. ನಮ್ಮ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಬಿಟ್ಟು ಕೊಡಬಾರದು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಒಂದು ವೇಳೆ ಜೆಡಿಎಸ್ ಗೆ ಬಿಟ್ಟುಕೊಟ್ಟರು ಕೂಡಾ ಅದನ್ನು ಬೆಂಬಲಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next