Advertisement

ಹಾಸ್ಪಿಟಾಲಿಟಿ ಕ್ಷೇತ್ರಕ್ಕೆ ನೆರವು ವಿಸ್ತರಣೆ: ಸಚಿವ ಅನುರಾಗ್‌ ಠಾಕೂರ್‌

09:40 PM Aug 17, 2022 | Team Udayavani |

ನವದೆಹಲಿ: ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಆತಿಥ್ಯ ಕ್ಷೇತ್ರ (ಹಾಸ್ಪಿಟಾಲಿಟಿ) ಮತ್ತು ಸಂಬಂಧಿತ ಕ್ಷೇತ್ರಗಳಿಗೆ ನೆರವು ನೀಡಲು ಕೇಂದ್ರ ಮುಂದಾಗಿದೆ. ತುರ್ತು ಸಾಲ ಖಾತರಿ ಯೋಜನೆ (ಇಸಿಎಲ್‌ಜಿಎಸ್‌)ಗೆ ಹೆಚ್ಚುವರಿ 50,000 ಕೋಟಿ ರೂ. ನೀಡುವುದಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ.

Advertisement

ಹೀಗಾಗಿ, ಹಾಲಿ ಇರುವ ವಿತ್ತೀಯ ನೆರವಿನ ಮೊತ್ತ 4.5 ಲಕ್ಷ ಕೋಟಿ ರೂ.ಗಳಿಂದ 5 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿರುವ ನಿರ್ಧಾರದ ಬಗ್ಗೆ ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದ್ದಾರೆ.

ಟಿಕೆಡಿಎಲ್‌ ಎಲ್ಲರಿಗೂ ಲಭ್ಯ:
ವೈದ್ಯಕೀಯ ಸಸ್ಯಗಳು ಮತ್ತು ಅನೇಕ ವಿಚಾರಗಳಲ್ಲಿನ ಭಾರತೀಯ ಸಾಂಪ್ರದಾಯಿಕ ಜ್ಞಾನ ಭಂಡಾರವಾಗಿರುವ “ಸಾಂಪ್ರದಾಯಿಕ ಜ್ಞಾನ ಡಿಜಿಟಲ್‌ ಗ್ರಂಥಾಲಯ’ದ ದತ್ತಾಂಶವನ್ನು ಕೇವಲ ಪೇಟೆಂಟ್‌ ಪಡೆದವರಿಗೆ ಮಾತ್ರವಲ್ಲದೆ ಎಲ್ಲರಿಗೂ ಲಭ್ಯವಾಗಿಸುವುದಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next