Advertisement

ಗೊಬ್ಬರಗಳಿಗೆ ಕೇಂದ್ರದ 28,655 ಕೋಟಿ ರೂ. ಸಬ್ಸಿಡಿ

12:06 AM Oct 14, 2021 | Team Udayavani |

ಹೊಸದಿಲ್ಲಿ: ಪೊಟಾಶಿಯಂ, ರಂಜಕಯುಕ್ತ ಗೊಬ್ಬರಗಳು ಸೇರಿದಂತೆ ಹಲವು ಪೌಷ್ಠಿಕಾಂಶ ಆಧಾರಿತ ಗೊಬ್ಬರಗಳಿಗೆ ಕೇಂದ್ರ ಸರಕಾರ, 28,655 ಕೋಟಿ ರೂ.ಗಳ ಸಬ್ಸಿಡಿ ಘೋಷಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ, ಪೊಟ್ಯಾ ಶಿಯಂ ಹಾಗೂ ರಂಜಕಯುಕ್ತ ಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್‌) ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಅಂದಹಾಗೆ, ಈ ಸಬ್ಸಿಡಿ, ಈ ವರ್ಷದ ಅಕ್ಟೋಬರ್‌ನಿಂದ ಮುಂದಿನ ವರ್ಷ ಮಾರ್ಚ್‌ವರೆಗಿನ ಅವಧಿಗೆ ಅನ್ವಯ ವಾಗಲಿದೆ.

ಹಿಂಗಾರು ಬಿತ್ತನೆಯ ತರಾತುರಿಯಲ್ಲಿರುವ ರೈತರಿಗೆ ಗೊಬ್ಬರಗಳು ಕೈಗೆಟಕುವ ಬೆಲೆಯಲ್ಲಿ ಸಿಗಲೆಂಬ ಸದುದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಇದರಿಂದಾಗಿ, ನೈಟ್ರೋಜನ್‌ ಯುಕ್ತ ಗೊಬ್ಬರದ ದರ ಪ್ರತೀ ಕೆ.ಜಿ.ಗೆ 18.789 ರೂ., ರಂಜಕಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 45.323 ರೂ. ಹಾಗೂ ಪೊಟ್ಯಾಶಿಯಂ ಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 10.116 ಹಾಗೂ ಗಂಧಕ ಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 2.374 ರೂ.ಗಳಿಗೆ ಸಿಗಲಿವೆ.

ಇದನ್ನೂ ಓದಿ:ಫೈನಲ್‌ ಪ್ರವೇಶಿಸಿದ ಕೋಲ್ಕತಾ ನೈಟ್‌ರೈಡರ್

Advertisement

Udayavani is now on Telegram. Click here to join our channel and stay updated with the latest news.

Next