Advertisement

ಕಾಂಗ್ರೆಸ್ ನವರಿಗೆ ಕೇವಲ ಬೇರೆಯವರ ಮೇಲೆ ಬೆಟ್ಟು ಮಾಡಿ ತೋರಿಸುವುದೇ ಕೆಲಸ: ಸಿ.ಟಿ. ರವಿ

09:44 AM Feb 17, 2020 | keerthan |

ಶಿವಮೊಗ್ಗ: ಕಾಂಗ್ರೆಸ್ ಪಕ್ಷದವವರಿಗೆ ಕೇವಲ ಬೇರೆಯವರ ಮೇಲೆ ಬೆಟ್ಟು ಮಾಡಿ ತೋರಿಸುವುದೇ ಕೆಲಸ. ಅವರ ಪಕ್ಷದ ವಿಚಾರ ಬಿಟ್ಟು, ಬೇರೆಯವರ ಮೇಲೆ ಆರೋಪಿಸುವುದರಲ್ಲೇ ಬಿಜಿಯಾಗಿದ್ದಾರೆ. ಅವರಿಗೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದು ಕಂಡು ಬರುತ್ತಿಲ್ಲ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಚಾರ ಕಾಂಗ್ರೆಸ್ ನವರಿಗೆ ಕಗ್ಗಂಟಾಗುತ್ತಿದೆ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ನಡೆಯುವ ಶಾಸಕಾಂಗ ಸಭೆ ವಿಚಾರವಾಗಿ ಮಾತನಾಡಿದರು. ನಾಳೆ ವಿಧಾನ ಪರಿಷತ್ ಚುನಾವಣೆ ಇರುವದರಿಂದ ಈ ಬಗ್ಗೆ ಇಂದಿನ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಜೊತೆಗೆ, ಮುಂಬರುವ ಅಧಿವೇಶನದ ಕುರಿತು ಕೂಡ ಚರ್ಚಿಸಲಾಗುವುದು. ಇದಲ್ಲದೇ, ಶಾಸಕರುಗಳ ಕ್ಷೇತ್ರಗಳ ಮತ್ತು ಜನರ ಸಮಸ್ಯೆ ಕುರಿತು ಚರ್ಚೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next