Advertisement

ಸಿಂದಗಿ ಜನರು ಕಾಂಗ್ರೆಸ್ ಕೋಣ, ಜೆಡಿಎಸ್ ಹಸು ಬಿಟ್ಟು ಬಿಜೆಪಿ ಎತ್ತು ಕಟ್ಟಿ : ಸಿ.ಟಿ.ರವಿ

01:57 PM Oct 25, 2021 | Team Udayavani |

ವಿಜಯಪುರ: ಸಿಂದಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಕೋಣವನ್ನೂ ಕಟ್ಟಬೇಡಿ, ಜೆಡಿಎಸ್ ಪಕ್ಷದ ಹಸುವನ್ನೂ ಕಟ್ಟಬೇಡಿ. ಬಿಜೆಪಿ ಪಕ್ಷದ ರಮೇಶ ಭೂಸನೂರ ಎಂಬ ಎತ್ತನ್ನು ಕಟ್ಟಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.

Advertisement

ಸೋಮವಾರ ಸಿಂದಗಿ ಉಪ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಂದಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ರೋಡ್ ಶೋ ಪ್ರಚಾರ ನಡೆಸಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಜೆಡಿಎಸ್ ತನ್ನ ನಡವಳಿಕೆಯಿಂದ ಸ್ವಯಂ ಮುಗಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

ಸಿಂದಗಿ ಮತದಾರರು ಈ ಬಾರಿ ಸಿದ್ರಾಮಣ್ಣ, ಕುಮಾರಣ್ಣ ಇಬ್ಬರಿಗೂ ನಿಮ್ಮ ಪಕ್ಷಕ್ಕೆ ಓಟು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ. ರೊಟ್ಟಿ, ಮೊಸರು, ಮುದ್ದೆ ಬುತ್ತಿ ಕಟ್ಟಿ ಕೊಡುತ್ತೇವೆ, ಮನೆಕಡೆ ಹೊಂಡ್ರಿ, ನಿಮಗೆ ಇಲ್ಲಿ ಓಟು ಸಿಗೋದಿಲ್ಲ ಎಂದು ಹೇಳಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next