Advertisement

ಬೀದಿಗೆ ಬಿದ್ದಿದ್ದ ಸಿದ್ದು ಬಾದಾಮಿಗೆ ಕರೆ ತಂದಿದ್ದು ನಾನೇ: ಸಿ.ಎಂ. ಇಬ್ರಾಹಿಂ

11:19 PM Jun 28, 2022 | Team Udayavani |

ಬಾಗಲಕೋಟೆ: ಕ್ಷೇತ್ರವೇ ಇಲ್ಲದೇ ಬೀದಿಗೆ ಬಿದ್ದಿದ್ದ ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆ ತಂದಿದ್ದು ನಾನು. ಎಸ್‌.ಆರ್‌. ಪಾಟೀಲ್‌, ಆರ್‌.ಬಿ.ತಿಮ್ಮಾಪುರ ಹಾಗೂ ಬಾದಾಮಿಯ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ, ಜಿಲ್ಲೆಗೆ ಕರೆ ತಂದಿದ್ದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಂದರೆ ಕನಿಷ್ಠ ಈ ಭಾಗದಲ್ಲಿ 20 ಶಾಸಕರು ಹೆಚ್ಚಿಗೆ ಆಯ್ಕೆಯಾಗುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, 20 ಜನ ಅಭ್ಯರ್ಥಿಗಳು ಸೋತರು. ಸಿದ್ದರಾಮಯ್ಯ ಜತೆಗೆ ಸದ್ಯ ಯಾರೂ ಇಲ್ಲ. ನಾನೊಬ್ಬನೆ ಮಾತನಾಡುತ್ತೇನೆ. ನನ್ನ ಪರ ಯಾರೂ ಮಾತನಾಡಲ್ಲ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದರು ಎಂದರು.

ಚುನಾವಣೆ ವೇಳೆ “ಸಿಡಿ ಸ್ಫೋಟ’!
ನಮ್ಮ ವಿರುದ್ಧ ಪ್ರಸಾರ ಮಾಡದಂತೆ ರಾಜ್ಯದ ಸುಮಾರು 12 ಜನ ಸಚಿವರು, ಕೆಲ ಶಾಸಕರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಸಿಡಿಯಲ್ಲಿ ಏನಿದೆ ಎಂದು ನೋಡಿ ಎಂದು ಸಭಾಪತಿಗಳಿಗೆ ಹೇಳಿದ್ದೆ.

ವಿಧಾನಸೌಧದಲ್ಲಿ ಬಹಳ ಗೌರವಾನ್ವಿತರಂತೆ ಮಾತನಾಡುತ್ತಾರೆ. ಆದರೆ, ಅವರ ಹುಳುಕೆಲ್ಲ ಸಿಡಿಯಲ್ಲಿದೆ. ಆ ಸಿಡಿಗಳು ಚುನಾವಣೆ ವೇಳೆ ಹೊರ ಬರುತ್ತವೆ. ಸುಮಾರು 17ರಿಂದ 18 ಸಿಡಿ ಇವೆ. ಅದರಲ್ಲಿ ಒಬ್ಬ ಗೋಪಾಲ ನಾನು ತಡೆಯಾಜ್ಞೆ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ, ಅವರ ಹೈಟ್‌, ವೇಟ್‌ಗೆ ಏನೂ ಮಾಡಲು ಆಗಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next