Advertisement

ತುಂಗಭದ್ರಾ ಡ್ಯಾಂ ನೀರು ನುಗ್ಗಿ ಹಾನಿಯಾದ ಸ್ಥಳಕ್ಕೆ ಸಚಿವ ಸಿ. ಸಿ ಪಾಟೀಲ್ ಭೇಟಿ, ಪರಿಶೀಲನೆ

02:02 PM Aug 22, 2019 | keerthan |

ಕೊಪ್ಪಳ: ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ ಮುರಿದು ಹಾನಿಯಾದ ಕೊಪ್ಪಳ ಜಿಲ್ಲೆ ಮುನಿರಾಬಾದ್ ಸೇರಿ ವಿವಿಧ ಪ್ರದೇಶಗಳಿಗೆ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಡ್ಯಾಂ ನೀರು ತಾಲೂಕಿನ ಮುನಿರಾಬಾದ್ ಗ್ರಾಮಕ್ಕೆ ನುಗ್ಗಿ 140ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿದ್ದವು. ಗ್ರಾಮದ ಜನರ ಜೊತೆ ಮಾತನಾಡಿದ ಸಚಿವರು ಈಗಾಗಲೆ ಸಿಎಂ ಅವರು ನೀರಿನಿಂದ ಹಾನಿಯಾದ ಮನೆಗಳ ಕುಟುಂಬಕ್ಕೆ 10 ಸಾವಿರ ರೂ ಬಿಡುಗಡೆ ಮಾಡಿದೆ. ಜನರು ಡ್ಯಾಂ ನೀರು ನುಗ್ಗಿದ್ದರಿಂದ ಕುಡಿಯುವ ನೀರಿನ ಪೈಪ್ ಲೈನ್ ಹಾಳಾಗಿದೆ. ನಮಗೆ ಕುಡಿಯಲು ನೀರಿಲ್ಲ ಎಂದು ಜನರು ಸಚಿವರ ಗಮನಕ್ಕೆ ತಂದರು.

ಇನ್ನೂ ಮನೆಗಳು ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದರು. ಅಲ್ಲದೇ, ನಮಗೆ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು. ಮೊದಲು ಇಲ್ಲಿನ ಜನರ ಮನೆಗಳ ಹಾನಿಗೆ ಸರ್ಕಾರ ಪರಿಹಾರ ನೀಡಿದೆ. ಇನ್ನೂ ಮೂರು ದಿನದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಮುನಿರಾಬಾದ್ ನಲ್ಲಿ ಹಾನಿಯಾದ ಕುರಿತು ಕ್ರಿಯಾಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಡ್ಯಾಂ ನೀರಿನಿಂದ ಪಂಪಾವನ ಹಾನಿಯಾದ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ, ಹಾಲಪ್ಪ, ಬಸವರಾಜ ದಡೆಸೂಗೂರು, ರಾಘವೇಂದ್ರ ಹಿಟ್ನಾಳ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next