Advertisement

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

04:31 PM Jul 15, 2020 | Team Udayavani |

ಕೊಲ್ಲೂರು: ಸಚಿವ ಬೈರತಿ ಬಸವರಾಜ್‌ ಅವರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಹರಕೆಯ ರೂಪದಲ್ಲಿ ಬೆಳ್ಳಿ ಖಡ್ಗ ಸಮರ್ಪಿಸಿದರು.

Advertisement

ರಾಜಕೀಯ ಗೊಂದಲದ ಸಂದರ್ಭದಲ್ಲಿ ತಾಯಿ ಮೂಕಾಂಬಿಕೆಗೆ ಸಚಿವರು ಮಾಡಿರುವ ಹರಕೆ ಪೂರೈಸಲು ಇಲ್ಲಿಗೆ ಆಗಮಿಸಿದ್ದರು.

ತಮಿಳುನಾಡಿನ ಮುಖ್ಯಮಂತ್ರಿ ದಿ.ಎಂ.ಜಿ.ರಾಮಚಂದ್ರನ್‌ ಅವರು ಇಷ್ಟಾರ್ಥ ಪೂರೈಕೆ ಆಗಿದ್ದ ಆ ಕಾಲ ಘಟ್ಟದಲ್ಲಿ ಮೂಕಾಂಬಿಕೆಗೆ ಚಿನ್ನದ ಖಡ್ಗವನ್ನು ಕಾಣಿಕೆ ರೂಪದಲ್ಲಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಚಿವರೊಡನೆ ದೇಗುಲದ ಆಡಳಿತಾಧಿಕಾರಿ ಹಾಗೂ ಉಪಕಮೀಷನರ್‌ ಆಗಿರುವ ರಾಜು, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ.ಸುತಗುಂಡಿ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸದಸ್ಯ ಕಿಶೋರ್‌ ಕುಮಾರ್‌. ಉಡುಪಿ ನಗರ ಯೋಜನಾ ಸದಸ್ಯ ಜಿತೇಶ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next