Advertisement

ಉಪಚುನಾವಣೆ ಜಯ: ಕಾಂಗ್ರೆಸ್‌ ವಿಜಯೋತ್ಸವ

03:01 PM Apr 14, 2017 | |

ಉಡುಪಿ: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ವಿಜಯೋತ್ಸವವನ್ನು ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಸರ್ವಿಸ್‌ ಬಸ್‌ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಪಟಾಕಿ ಸಿಡಿಸುವ ಮೂಲಕ ಆಚರಿಸಲಾಯಿತು. 

Advertisement

ಬಿಜೆಪಿಯ ಅಪಪ್ರಚಾರದ ನಡುವೆಯೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಲು ರಾಜ್ಯದ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮಗಳೇ ಕಾರಣ. ಬಿಜೆಪಿಯ ಸ್ಥಳೀಯ ಮಾಜಿ ಶಾಸಕರು ಸಚಿವ ಪ್ರಮೋದ್‌ ಮಧ್ವರಾಜ್‌ ಮೇಲೆ ಬೇಕಾದಷ್ಟು ಆಪಾದನೆಗಳನ್ನು ಮಾಡಿದರೂ ಜನ ಅದನ್ನು ನಂಬುವುದಿಲ್ಲ ಎಂಬುದಕ್ಕೆ  ಚುನಾವಣೆ ಫ‌ಲಿತಾಂಶವೇ ಸಾಕ್ಷಿ ಎಂದು  ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಹೇಳಿದರು. 

ಪಕ್ಷದ ನಾಯಕರಾದ ವೆರೋನಿಕಾ ಕರ್ನೇಲಿಯೋ, ಜ್ಯೋತಿ ಹೆಬ್ಟಾರ್‌, ಪ್ರಖ್ಯಾತ್‌ ಶೆಟ್ಟಿ, ಹರೀಶ್‌ ಕಿಣಿ, ಲಕ್ಷಿ¾àಕಾಂತ್‌ ಬೆಸ್ಕೂರ್‌, ರಮೇಶ್‌ ಕಾಂಚನ್‌, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್‌ರಾಜ್‌, ಶೋಭಾ ಪೂಜಾರಿ, ಸೆಲಿನ ಕರ್ಕಡ, ಗಣೇಶ್‌ ನೆರ್ಗಿ, ರಮೇಶ್‌ ಪೂಜಾರಿ, ನಾರಾಯಣ್‌ ಪಿ. ಕುಂದರ್‌, ಶೇಖರ್‌ ಜಿ. ಕೋಟ್ಯಾನ್‌, ಶಾಂತಾರಾಮ್‌ ಸಾಲ್ವಂಕರ್‌, ಸುಕೇಶ್‌ ಕುಂದರ್‌, ಪ್ರಶಾಂತ್‌ ಪೂಜಾರಿ, ಭಾಸ್ಕರ್‌ರಾವ್‌ ಕಿದಿಯೂರು ಉಪಸ್ಥಿತರಿದ್ದರು. ಕೆ. ಜನಾರ್ದನ್‌ ಭಂಡಾರ್ಕಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next