Advertisement

ಪಡಿತರ ಅಕ್ಕಿ ಖರೀದಿ: ವ್ಯಕ್ತಿ ಬಂಧನ

11:46 AM Dec 19, 2021 | Team Udayavani |

ವಾಡಿ: ನ್ಯಾಯಬೆಲೆ ಅಂಗಡಿಗಳ ಮೂಲಕ ಬಡ ಕುಟುಂಬಗಳಿಗೆ ವಿತರಿಸ ಲಾಗುತ್ತಿರುವ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಪಡಿತರದಾರರಿಂದಲೇ ಖರೀದಿಸಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ರಾವೂರ ಗ್ರಾಮದ ಕಿರಾಣಿ ವ್ಯಾಪಾರಿ ಸಿದ್ಧಯ್ಯಸ್ವಾಮಿ ನಂದಿಕೋಲ ಬಂಧಿತ ಆರೋಪಿತ.

ಗ್ರಾಮದ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಅಕ್ಕಿ ಪಡೆದುಕೊಂಡ ಪಡಿತರದಾರರಿಗೆ ಹಣದ ಆಮಿಷ ತೋರಿಸಿ ಕಡಿಮೆ ದರದಲ್ಲಿ ದಾಸ್ತಾನು ಖರೀದಿಸುವ ಮೂಲಕ ಹಣ ಮಾಡುತ್ತಿದ್ದ ಎನ್ನಲಾಗಿದೆ. ಹೀಗೆ ಅಂಗಡಿಯಲ್ಲಿ ಸಂಗ್ರಹಿಸಿದ್ದ ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು ಶನಿವಾರ ವಾಹನದಲ್ಲಿ ತುಂಬಿ ಶಹಾಬಾದ ಮಾರುಕಟ್ಟೆಗೆ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವ ಮೂಲಕ ಅಕ್ರಮ ದಂಧೆಗೆ ಬಳಸಿದ್ದ ವಾಹನ ಮತ್ತು ಅಕ್ಕಿ ದಾಸ್ತಾನು ಜಪ್ತಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next