Advertisement

ಗುರುಪುರ ನದಿಯಲ್ಲಿ ಉದ್ಯಮಿ ಆಶಿತ್‌ ಕುಮಾರ್‌ ಶವವಾಗಿ ಪತ್ತೆ;ಆತ್ಮಹತ್ಯೆ ಶಂಕೆ

10:02 PM Mar 06, 2023 | Team Udayavani |

ಮಂಗಳೂರು: ಗುರುಪುರ ಸೇತುವೆ ಬಳಿ ರವಿವಾರ ನದಿಯಲ್ಲಿ ಶವವಾಗಿ ಕಂಡುಬಂದ ವ್ಯಕ್ತಿ ಮೂಡುಬಿದಿರೆಯ ಹೊರವಲಯ, ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಮೂಲದ ಉದ್ಯಮಿ ಆಶಿತ್‌ ಕುಮಾರ್‌ (50) ಎಂದು ತಿಳಿದು ಬಂದಿದೆ. ಅವರು ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

Advertisement

ಮೂಡುಬಿದಿರೆಯಲ್ಲೂ ಶಿಕ್ಷಣ ಪಡೆದಿದ್ದ ಆಶಿತ್‌ ಕುಮಾರ್‌ ಮೂಡುಬಿದಿರೆ ತ್ರಿಭುವನ್‌ ಜೇಸೀ, ಮಹಾವೀರ ಕಾಲೇಜು ಹಳೆವಿದ್ಯಾರ್ಥಿ ಸಂಘ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ತ್ರಿಭುವನ್‌ ಜೇಸೀಸ್‌ ನಲ್ಲಿ ಅಧ್ಯಕ್ಷ, ವಲಯ 15ರ ಅಧ್ಯಕ್ಷ ಮೊದಲಾದ ಹುದ್ದೆಗಳನ್ನು ನಿರ್ವಹಿಸಿದ್ದರು. ಮೊದಲಿಗೆ ಮಹಾವೀರ ಇಲೆಕ್ಟ್ರಾನಿಕ್ಸ್‌ ಹೆಸರಿನ ಸಂಸ್ಥೆ ನಡೆಸುತ್ತಿದ್ದ ಅವರು ವಿವಿಧ ವಿಮಾ ಕಂಪೆನಿಗಳ ಪ್ರತಿನಿಧಿಯಾಗಿದ್ದರು. ಕೆಲವು ವರ್ಷಗಳಿಂದ ಅವರು ಮಂಗಳೂರಿನಲ್ಲಿ ನೆಲೆಸಿದ್ದರು.

ಆಶಿತ್‌ ಕುಮಾರ್‌ ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಇವರು ಶನಿವಾರ ಮನೆಯಿಂದ ಹೊರಟಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆತ್ಮಹತ್ಯೆಗೆ ಆರ್ಥಿಕ ಒತ್ತಡವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ವರದಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next