Advertisement

ಕಳಚಿ ಬಿದ್ದ ಬಸ್‌ ಟೈರ್‌: ಅಪಾಯದಿಂದ ಪಾರು

03:05 PM May 27, 2022 | Team Udayavani |

ಆಲ್ದೂರು: ಚಿಕ್ಕಮಗಳೂರಿನಿಂದ -ಆಲ್ದೂರು ರಾಜ್ಯ ಹೆದ್ದಾರಿ 27 ರ ಮಾರ್ಗವಾಗಿ ಆಲ್ದೂರಿಗೆ ಬರುತ್ತಿದ್ದ ಕಡೂರು- ಮಂಗಳೂರು ಕೆಎಸ್.ಆರ್.ಟಿ.ಸಿ. ಬಸ್‌ನ ಮುಂಭಾಗದ ಬಲಬದಿಯ ಟೈರ್‌ ತೋರಣಮಾವು ಗ್ರಾಮದ ಬಳಿ ಕಳಚಿ ಬಿದ್ದಿದ್ದು ಅದೃಷ್ಟ ವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ಅವಘಡವೊಂದು ತಪ್ಪಿದ್ದು ಬಸ್‌ನಲ್ಲಿದ್ದ ಸುಮಾರು 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ 8.30ಕ್ಕೆ ಆಲ್ದೂರು ಮಾರ್ಗವಾಗಿ ಈ ಬಸ್‌ ಸಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಮಂಗಳೂರು ಆಸ್ಪತ್ರೆಗೆ ಹೋಗುವವವರ ಸಂಖ್ಯೆ ಹೆಚ್ಚಿರುತ್ತದೆ. ಬೆಳಗ್ಗೆ 8- 30 ರ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ಬಸ್‌ ರಸ್ತೆ ಮಧ್ಯೆಯೇ ನಿಂತ ಪರಿಣಾಮ ವಾಹನಗಳು ಸಾಗಲು ಜಾಗವಿಲ್ಲದೆ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜ್ಯಾಮ್‌ ಉಂಟಾಗಿತ್ತು. ಬೆಳಗ್ಗೆ ಕಚೇರಿಗಳಿಗೆ ತೆರಳುವ ನೌಕರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.

ಬೆಳಗ್ಗೆ ನಾವು ಬಸ್‌ ಹಿಂಬದಿಯಲ್ಲೇ ಬರುತ್ತಿದ್ದೆವು. ಬಸ್‌ ನಿಧಾನವಾಗಿ ಸಾಗುತ್ತಿತ್ತು. ತೋರಣಮಾವು ಗ್ರಾಮದ ಬಳಿ ಬಸ್‌ನ ಬಲಭಾಗದ ಟೈರ್‌ ಏಕಾಏಕಿ ಕಳಚಿದ ಪರಿಣಾಮ ಬಸ್‌ ಒಂಡೆದೆ ವಾಲಿತು. ಚಾಲಕ ನಿಧಾನವಾಗಿ ಬಸ್‌ ಅನ್ನು ನಿಯಂತ್ರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು ಎಂದು ಪ್ರತ್ಯಕ್ಷದರ್ಶಿ ಮೂರ್ತಿ ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next