Advertisement
ಕೋವಿಡ್ -19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಏ. 28ರಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶದಂತೆ ಕಳೆದ 45 ದಿನಗಳಿಂದ ಬಂದಾಗಿದ್ದ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಿಂದ ಲಾಕ್ಡೌನ್ಕ್ಕಿಂತ ಮುಂಚೆ 630 ಮಾರ್ಗ ಗಳಲ್ಲಿ ಬಸ್ ಸಂಚಾರವಿತ್ತು. ಇಂದಿನಿಂದ 125 ಮಾರ್ಗಗಳಲ್ಲಿ ಆರಂಭ ಮಾಡಿ ಜನರು ಪ್ರತಿಕ್ರಿಯೆ ನೋಡಿಕೊಂಡು ಎರಡು ಮೂರು ದಿನಗಳಲ್ಲಿ ಬಸ್ ಸಂಚಾರ ಹೆಚ್ಚಿಸಲಾಗುವುದು.
Related Articles
Advertisement
ಸದ್ಯ ದಿನಸಿ ,ತರಕಾರಿ, ಹಣ್ಣು, ಹಾಲು, ಔಷಧಿ , ಜವಳಿ, ಬಂಗಾರದ ಅಂಗಡಿ, ಬಾಂಡೆ ಅಂಗಡಿ, ಮಾಂಸದ ಅಂಗಡಿ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳ ವ್ಯಾಪಾರ ವಾಣಿಜ್ಯ ವಹಿವಾಟುಗಳಿಗೆ ಸಂಜೆ 5 ಗಂಟೆಯವರೆಗೆ ಕೊರೊನಾ ನಿಯಮಗಳ ಅನುಸಾರವಾಗಿ ಅವಕಾಶ ನೀಡಲಾಗಿದೆ.
ಹೊಟೇಲ್ನಲ್ಲಿ ಶೇ 50ರಷ್ಟು ಜನರು ಕುಳಿತು ತಿನ್ನಲು ಅವಕಾಶ ನೀಡಲಾಗಿದೆ. ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಎಸಿ ಇಲ್ಲದೇ ತೆರೆಯಲು ಅವಕಾಶ ನೀಡಿದೆ. ಕಳೆದ ಎರಡು ತಿಂಗಳಿಂದ ಸ್ತಬ್ಧವಾಗಿದ್ದ ಸಾರಿಗೆ ಸಂಚಾರ ಸೋಮವಾರದಿಂದ ರಸ್ತೆಗಿಳಿಯಲು ಕೆಎಸ್ಆರ್ ಟಿಸಿ ಬಸ್ಗಳು ಸಕಲ ಸಿದ್ಧಗೊಂಡಿವೆ. ಕೆಎಸ್ಆರ್ಟಿಸಿ ಸಿಬ್ಬಂದಿ ಬಸ್ ಸ್ವತ್ಛಗೊಳಿಸಿ ಸ್ಯಾನಿಟೈಸರ್ ಕೈಗೊಂಡಿದ್ದಾರೆ.