Advertisement

ಬಸ್‌ ಸೇವೆ ಆರಂಭ-ಹರ್ಷ

06:03 PM Jan 28, 2022 | Team Udayavani |

ಬೀದರ: ನಗರದ ಅಮಲಾಪುರ ರಸ್ತೆಯಲ್ಲಿ ಇರುವ ಕರಡಿಮಲ್‌ ಲೇಔಟ್‌ ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಗರ ಸಾರಿಗೆ ಬಸ್‌ ಸೇವೆ ಆರಂಭಿಸಿದೆ.

Advertisement

ಬಸ್‌ಗೆ ಪೂಜೆ ಸಲ್ಲಿಸಿ ಸೇವೆಗೆ ಚಾಲನೆ ನೀಡಿದ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಮಾತನಾಡಿ, ನಾಗರಿಕರ ಬೇಡಿಕೆ ಮೇರೆಗೆ ಸಾರಿಗೆ ಸಂಸ್ಥೆ ಕರಡಿಮಲ್‌ ಲೇಔಟ್‌ವರೆಗೆ ನಗರ ಸಾರಿಗೆ ಬಸ್‌ ಸೇವೆ ವಿಸ್ತರಿಸಿದೆ. ಇದರಿಂದ ಕರಡಿಮಲ್‌ ಜತೆಗೆ ಕೆಇಬಿ ಕಾಲೋನಿ, ಸಂಗಮೇಶ್ವರ ಕಾಲೋನಿ ಹಾಗೂ ಶ್ರೀನಗರ ಕಾಲೋನಿ ನಿವಾಸಿಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಈ ವೇಳೆ ಮುಖಂಡರಾದ ವಿಶ್ವನಾಥ ಮಠಪತಿ, ಶಿವಮೂರ್ತಿ ಬಟನಾಪುರೆ, ವಿಜಯಕುಮಾರ ಕುಲಕರ್ಣಿ, ದತ್ತಾತ್ರಿ ದಾರಾ, ಮೌನೇಶ್ವರ ಸ್ವಾಮಿ, ಕಮಲಾಕರ್‌ ಸಿಂದೋಲ್‌, ಭೀಮಣ್ಣ ಅವಟೆ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next