Advertisement

ಲಾರಿ-ಬಸ್ ಮಧ್ಯೆ ಅಪಘಾತ ಇಬ್ಬರ ಸಾವು, _23 ಜನರಿಗೆ ಗಾಯ

10:11 AM Sep 13, 2019 | sudhir |

ವಿಜಯಪುರ : ವಿಜಯಪುರ : ನಗರದ ಹೊರ ವಲಯದ ತೊರವಿ ಬಳಿ ಲಾರಿ ಹಾಗೂ ಸಾರಿಗೆ ಸಂಸ್ಥೆಯ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ಹಾಗೂ ಬಸ್ ನ ಓರ್ವ ಪ್ರಯಾಣಿಕ ಮೃತಪಟ್ಟಿರುವ ಘಟನೆ ಜರುಗಿದೆ.

Advertisement

ಎರಡೂ ವಾಹನಗಳ ಚಾಲಕರು ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದು, ಆಂಧ್ರಪ್ರದೇಶ ಮೂಲದ ಲಾರಿ ಚಾಲಕ ಮಾದಪ್ಪ ಹಾಗೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತಿಕೋಟ ನಿವಾಸಿ, ಬಿಎಲ್ ಡಿಇ ಸಂಸ್ಥೆಯ ನೌಕರ ಬಾಳಾಸಾಹೇಬ್ ಕಾರಿ ಎಂದು ಗುರುತಿಸಲಾಗಿದೆ.

ತೊರವಿ ಬಳಿಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಳಿ ಗುರುವಾರ ರಾತ್ರಿ 8 ಗಂಟೆಗೆ ವಿಜಯಪುರ ನಗರದತ್ತ ಬರುತ್ತಿದ್ದ ಲಾರಿ ಹಾಗೂ ವಿಜಯಪುರ ನಗರದಿಂದ ತಿಕೋಟ ಕಡೆಗೆ ಹೊರಟಿದ್ದ ಬಸ್ ಮಧ್ಯೆ ಅಪಘಾತ ಸಂಭವಿದೆ.

ಅಪಘಾತದಲ್ಲಿ ಬಸ್ ನಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ.

ಅಪಘಾತ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಛಿದ್ರಗೊಂಡಿದ್ದು, ಇಬ್ಬರೂ ಚಾಲಕರು ವಾಹನಗಳಲ್ಲೇ ಸಿಲುಕಿಕೊಂಡಿದ್ದು, ಇಬ್ಬರನ್ನೂ ಹೊರ ತೆಗೆಯಲು ಹರಸಾಹಸ ಪಡಲಾಯಿತು.

Advertisement

ಘಟನೆಯಿಂದಾಗಿ ವಿಜಯಪುರ ಅಥಣಿ ಮಾರ್ಗದ ರಸ್ತೆಯ ಎರಡೂ ಕಡೆಗಳಲ್ಲಿ ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಅಸಗಮಿಸಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಅಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next