Advertisement

ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಚಾಲಕ ಅಮಾನತು

01:05 PM Sep 25, 2019 | Team Udayavani |

ಬೆಳಗಾವಿ: ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಯತ್ನಿಸಿದಾಗ ಅವರ ಜೀವ ಲೆಕ್ಕಿಸದೆ ಬಸ್ ಮುನ್ನುಗ್ಗಿಸಿದ ಆರೋಪದ ಮೇಲೆ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Advertisement

ದಾಂಡೇಲಿ -ಹಳಿಯಾಳ -ಬೆಳಗಾವಿ ಮಾರ್ಗದ (ವಾಹನ ಸಂಖ್ಯೆ ಕೆಎ 42  ಎಫ್ 1096) ಚಾಲಕ ಎಸ್ ಎಫ್ ಶೇಖ್ ಅವರನ್ನು ಅಮಾನತು ಮಾಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಗ್ರಾಮಾಂತರ ವಿಭಾಗ ಆದೇಶ ಹೊರಡಿಸಿದೆ.

ಮಂಗಳವಾರ ಮಧ್ಯಾಹ್ನದ ಅವಧಿಯಲ್ಲಿ ಬೇಕವಾಡ ಕ್ರಾಸ್ ಹತ್ತಿರ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ವಿದ್ಯಾರ್ಥಿಗಳು ಬಸ್ಸನ್ನು ನಿಲ್ಲಿಸುವಂತೆ ಸೂಚಿಸಿದ್ದರು  ಅವರನ್ನು ಲೆಕ್ಕಿಸದೆ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿಯಿಂದ ಬಸ್ ಓಡಿಸಿಕೊಂಡು ಹೋಗಿದ್ದರು. ಆಗ ಓರ್ವ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದನು.

ಚಾಲಕನ ವರ್ತನೆಯನ್ನು ಖಂಡಿಸಿ ತೀವ್ರ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ಯವಾಗಿತ್ತು. ಈ ಹಿನ್ನಲೆಯಲ್ಲಿ ನಿಯಮಾವಳಿ 1972ರ ಪ್ರಕಾರ ಚಾಲಕನ ನಡತೆ ಅಶಿಸ್ತು ಮತ್ತು ದಂಡನಾರ್ಹವಾಗಿತ್ತು ಎಂದು ಪರಿಗಣಿಸಿ  ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next