Advertisement

ಆಟೋಗೆ ಬಸ್‌ ಡಿಕ್ಕಿ: ನಾಲ್ವರ ದುರ್ಮರಣ

01:20 AM Jul 05, 2019 | Sriram |

ತುಮಕೂರು: ನಗರದ ಹೊರವಲಯದ ಮಲ್ಲಸಂದ್ರ ಬಳಿ ಗುರುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ವೃದ್ಧ ದಂಪತಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮೃತಪಟ್ಟವರನ್ನು ಗುಬ್ಬಿ ತಾಲೂಕಿನ ಪತ್ರೆಮತ್ತಿಘಟ್ಟ ಗ್ರಾಮದ ನಿವೃತ್ತ ಶಿಕ್ಷಕ ಎ.ಬಸವರಾಜಪ್ಪ (84), ಇವರ ಪತ್ನಿ ರೇಣುಕಾಂಬ (74), ಆಟೋ ಚಾಲಕ ಬಸವರಾಜು (37) ಹಾಗೂ ಸಂಜಯ್‌ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗುಬ್ಬಿ ಪಟ್ಟಣದಿಂದ ಪ್ರಯಾಣಿಕರನ್ನು ಹೊತ್ತು ಆಟೋರಿಕ್ಷಾ ತುಮಕೂರು ಕಡೆಗೆ ಬರುತ್ತಿತ್ತು. ತುಮಕೂರು ಕಡೆಯಿಂದ ಅತಿ ವೇಗವಾಗಿ ತಿಪಟೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌, ಮಲ್ಲಸಂದ್ರದ ಹಾಲಿನ ಡೇರಿ ಮುಂಭಾಗದಲ್ಲಿ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next