Advertisement

ಕಬಕ ಬಸ್ಸು –ಕಾರು ಡಿಕ್ಕಿ ಒಂದು ಸಾವು

10:13 AM Aug 13, 2019 | keerthan |

ಪುತ್ತೂರು: ಇಲ್ಲಿನ ಹೊರವಲಯದ ಪೋಳ್ಯ ಎಂಬಲ್ಲಿ ಖಾಸಗಿ ಬಸ್ಸ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಒಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಇಂದು ಮದ್ಯಾಹ್ನ ಸಂಭವಿಸಿದೆ .

Advertisement

ಈಶ್ವರಮಂಗಲದ ಮುಂಡೋಳೆಯ ಅಬ್ದುಲ್ ಹಕೀಮ್(23) ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಪುತ್ತೂರಿನಿಂದ ಮಂಗಳೂರು ಕಡೇ ತೆರಳುತಿದ್ದ ಝೆನ್ ಕಾರು ಹಾಗೂ ಮಂಗಳೂರಿನಿಂದ ಪುತ್ತೂರಿಗೆ ತೆರಳುತಿದ್ದ ಖಾಸಗಿ ಬಸ್ಸ್  ನಡುವೆ ಈ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

Advertisement

ಮೃತರು ಕಾರಿನಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ತಮ್ಮ ಬಂಧು ,ಮಿತ್ರರ ಮನೆಗೆ ತೆರಳುತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಉದ್ರಿಕ್ತರಿಂದ ಬಸ್ ಗೆ ಕಲ್ಲು ತೂರಾಟ:

ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಘಟನಾ ಸ್ಥಳದಲ್ಲಿ ಸೇರಿದ ಉದ್ರಿಕ್ತರು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದಾರೆ. ಕಲ್ಲು ತೂರಾಟದಿಂದ ಬಸ್ಸಿನ ಹಿಂಬಾಗದ ಗಾಜು ಒಡೆದು ಹೋಗಿದೆ.

ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದರಿಂದ ಕೆಲ ಸಮಯಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next