Advertisement

ಗುರುಪುರದಲ್ಲಿ  ಬಸ್‌ -ಬೈಕ್‌ ಢಿಕ್ಕಿ: ಪೊಲೀಸ್‌ ಸಾವು

01:00 AM Mar 20, 2019 | Harsha Rao |

ಗುರುಪುರ: ಖಾಸಗಿ ವೇಗದೂತ ಬಸ್‌ ಧಾವಂತಕ್ಕೆ ಬೆ„ಕ್‌ ಸವಾರ ಪೊಲೀಸ್‌ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ಗುರುಪುರ ಜಂಕ್ಷನ್‌ಗೆ ಮೇಲ್ಗಡೆ ಸಂಭವಿಸಿದೆ. ಮಂಗಳೂರು ಐಜಿ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಕಾರ್ಕಳದ ಬೆಳುವಾಯಿಯ ದೇವಿನಗರದ ಶಿವಶಕ್ತಿ ಕೃಪಾದ ನಿವಾಸಿ ಚನ್ನಪ್ಪ ಲಮಾಣಿಯ ಪುತ್ರ ಮಹೇಶ್‌ ಲಮಾಣಿ(32) ಮೃತಪಟ್ಟವರು.ಈ ಸಂದರ್ಭ ಪ್ರಯಾಣಿಕರೊಬ್ಬರಿಗೆ ತರಚು ಗಾಯವಾಗಿದೆ.

Advertisement

ಘಟನೆಯ ವಿವರ
ಮಂಗಳೂರಿನ ಕಡೆಗೆ ಸಾಗುತ್ತಿದ್ದ ಮಂಗಳೂರು-ಕಾರ್ಕಳ ರೂಟಿನ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಗುರುಪುರದಲ್ಲಿ ಮಂಗಳೂರಿನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಮತ್ತೂಂದು ಎಕ್ಸ್‌ಪ್ರೆಸ್‌ ಬಸ್ಸಿಗೆ ಡಿಕ್ಕಿಯಾಗಿ ಮುಂದೆ ಸಾಗಿತು. ವೇಗ ನಿಯಂತ್ರಣಕ್ಕೆ ಬರದ ಖಾಸಗಿ ಬಸ್‌ ಮುಂದಿದ್ದ ಬೆ„ಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೆ„ಕ್‌ ರಸ್ತೆ ಬದಿಗೆ ಎಸೆಯಲ್ಪಟ್ಟಿತ್ತು. ಬೆ„ಕಿನಲ್ಲಿದ್ದ ಮಹೇಶ್‌ ಅವರ ಹೆಲ್ಮೆಟ್‌ ಸಂಪೂರ್ಣ ನುಚ್ಚುನೂರಾಗಿದ್ದು, ರಸ್ತೆ ಮಧ್ಯೆ ಬಿದ್ದಿದ್ದರು. 

ಅವರ ತಲೆ ಮತ್ತು ದೇಹದ ಒಂದು ಭಾಗದ ಮೇಲೆಯೇ ಬಸ್ಸಿನ ಹಿಂದಿನ ಚಕ್ರ ಹರಿದು, ಸ್ಥಳದಲ್ಲಿಯೇ ಮƒತಪಟ್ಟಿದ್ದಾರೆ.  ಅಪಘಾತದ ತೀವ್ರತೆಗೆ ಮಿದುಳು ಹಾಗೂ ದೇಹದ ಒಂದು ಬದಿಯ ಅಂಗಾಂಗ ರಸ್ತೆಯಲ್ಲಿ ರಕ್ತಸಿಕ್ತಗೊಂಡು ಚೆಲ್ಲಿ ಬಿದ್ದಿತ್ತು. ಮƒತದೇಹವನ್ನು ಆಯ್ದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್‌ ನಿಲ್ಲಿಸಿ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಟ್ರಾಫಿಕ್‌ ಜಾಂ ಉಂಟಾಗಿತ್ತು. ಕೈಕಂಬದಿಂದ ಬಜಪೆ ಮುಖಾಂತರ ಬಸ್‌ಗಳು ಸಾಗಿದವು. ಬಜಪೆ ಪೊಲೀಸರು ಮಹಜರು ನಡೆಸಿ, ಗುರುಪುರ ಸೇವಾ ಬ್ರಿಗೇಡ್‌ ಆ್ಯಂಬುಲೆನ್ಸ್‌ ಮೂಲಕ ಶವವನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

ನಿರ್ಲಕ್ಷ್ಯವೇ  ಕಾರಣ
ಬಸ್‌ ಚಾಲಕನ ಅತಿವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಶಾಲ್‌ ಬಸ್‌ ಕೈಕಂಬದಿಂದಲೇ ಅತಿವೇಗದಲ್ಲಿ ಸಾಗಿ ಬರುತ್ತಿತ್ತು. ದಾರಿ ಮಧ್ಯೆ ಟಿಪ್ಪರ್‌ ಲಾರಿಯೊಂದನ್ನು ಓವರ್‌ಟೇಕ್‌ ಮಾಡುವ ಯತ್ನದಲ್ಲಿ ಅಪಘಾತ ಸಂಭವಿಸುವ ಅಪಾಯದಲ್ಲಿದ್ದಾಗ ಪ್ರಯಾಣಿಕರು ಬೊಬ್ಬೆ ಹೊಡೆದಿದ್ದರು ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಅಗಲ ಕಿರಿದಾದ ರಸ್ತೆ- ಅವೈಜ್ಞಾನಿಕ ಹಂಪ್ಸ್‌
ಗುರುಪುರದಲ್ಲಿ ಹಲವು ಬಾರಿ ಅಪಘಾತ ಸಂಭವಿಸಿ ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ರಸ್ತೆಯು ಅಗಲ ಕಿರಿದಾಗಿದ್ದು, ಇಲ್ಲಿ ಹಾಕಿರುವ ಹಂಪ್ಸ್‌ಗಳಿಗೆ ಬಣ್ಣ ಬಳಿಯದ ಕಾರಣ ಹಂಪ್ಸ್‌ಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೆಲವರ್ಷಗಳ ಮುಂಚೆ ಈಚರ್‌ ಲಾರಿಗೆ ಬಾಲಕನೊಬ್ಬ ಬಲಿಯಾದ ಸಂಧರ್ಭ ಇಲ್ಲಿ ಹಂಪ್ಸ್‌ ಅಳವಡಿಸಲಾಗಿತ್ತು. ಅಪಘಾತ ಕಡಿಮೆಯಾಗಬೇಕೆಂಬ ಸದುದ್ದೇಶದಿಂದ ಹಾಕಿದ್ದ ಹಂಪ್ಸ್‌ಗಳು ಅವೈಜ್ಞಾನಿಕವಾಗಿರುವುದಲ್ಲದೆ ಬಣ್ಣ ಬಳಿಯದ ಕಾರಣ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ ಇಲ್ಲಿನ ರಸ್ತೆಯಲ್ಲಿ ಸಾಕಷ್ಟು ಹೊಂಡಗಳಿದ್ದು, ಇಕ್ಕೆಲಗಳಲ್ಲಿಯೂ ಅಂಗಡಿ-ಮುಂಗಟ್ಟು ಮನೆಗಳಿರುವುದು ಈ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ನಿನ್ನೆ ನಡೆದ ಅಪಘಾತದ ವೇಳೆಯೂ ಹಂಪ್ಸ್‌ ಗುರುತಿಸಲು ಚಾಲಕ ವಿಫವಾಗಿರುವುದು ಕೂಡ ಅಪಘಾತಕ್ಕೆ ಇನ್ನೊಂದು ಕಾರಣವಿರಬಹುದೆಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿರುವ ಮಧ್ಯೆಯೇ ಇದೀಗ ಮತ್ತೂಂದು ಅಪಘಾತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಇನ್ನಷ್ಟು ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next