Advertisement

ಎತ್ತಿನಗಾಡಿ-ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ- ಎತ್ತು ಸ್ಥಳದಲ್ಲೇ ಸಾವು!

12:46 PM Feb 04, 2023 | Team Udayavani |

ಚಿಕ್ಕಮಗಳೂರು: ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎತ್ತಿನಗಾಡಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಮೃತ್ ಮಹಲ್ ಕಾವಲ್ ಬಳಿ ಸಂಭವಿಸಿದೆ.

Advertisement

ಮೃತ ಬೈಕ್ ಸವಾರ ಶಿವಮೊಗ್ಗ ಮೂಲದ ಸುರೇಶ್ (50) ಎಂದು ಗುರುತಿಸಲಾಗಿದೆ. ಬೈಕಿ ನಲ್ಲಿದ್ದ ಮತ್ತೋರ್ವ ಸವಾರ ರವಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಅಜ್ಜಂಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್

ಅಜ್ಜಂಪುರ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಅಂತರಘಟ್ಟೆ ಜಾತ್ರೆ ನಡೆಯುತ್ತಿದ್ದು, ಜಾತ್ರೆಗೆ ಬಂದಿದ್ದ ತರೀಕೆರೆ ತಾಲೂಕಿನ ಹಾದಿಕೆರೆ ಮೂಲದ ಎತ್ತಿನಗಾಡಿ ಊರಿಗೆ ವಾಪಸ್ ಹೋಗುವಾಗ ಈ ಘಟನೆ ಸಂಭವಿಸಿದೆ. ಎತ್ತಿನ ಗಾಡಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next