Advertisement

ಅಂಪಾರು: ಬೈಕ್‌ ಅಪಘಾತ; ಅಂಚೆ ಪಾಲಕ ಭಾಸ್ಕರ ಶೆಟ್ಟಿ ಸಾವು

07:38 PM Aug 18, 2022 | Team Udayavani |

ಸಿದ್ದಾಪುರ: ರಾಜ್ಯ ಹೆದ್ದಾರಿಯ ಅಂಪಾರು ಗ್ರಾಮದ ಮೂಡುಬಗೆ ಕೋಟೆಬೆಟ್ಟು ಕ್ರಾಸ್‌ ಬಳಿ ಸಿದ್ದಾಪುರ ಕಡೆಯಿಂದ ಅತೀ ವೇಗವಾಗಿ ಬಂದ ಬುಲೆಟ್‌ ಬೈಕ್‌ ಎದುರು ಕಡೆಯಿಂದ ಬರುತ್ತಿದ್ದ ಬೈಕಿಗೆ ನೇರವಾಗಿ ಢಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ನಡೆದಿದೆ.

Advertisement

ಢಿಕ್ಕಿ ಪರಿಣಾಮ ಬೈಕ್‌ ಸವಾರ ಕೆ. ಭಾಸ್ಕರ ಶೆಟ್ಟಿ (53) ಅವರು ರಸ್ತೆಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಹೆಲ್ಮೆಟ್‌ ಧರಿಸಿದ್ದರೂ ಉಳಿಯದ ಪ್ರಾಣ: ಭಾಸ್ಕರ ಶೆಟ್ಟಿ ಅವರು ಕೋಟೆಬೆಟ್ಟುವಿನಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕರ್ತವ್ಯದಿಂದ ಸ್ವಲ್ಪ ಬೇಗ ಮನೆಗೆ ಬಂದಿದ್ದರು. ಮನೆ ನಿರ್ಮಾಣಕ್ಕೆ ಬೇಕಾಗುವ ಮರದ ಬಗ್ಗೆ ಮಾತನಾಡಲು ಮನೆಯಿಂದ ನೇರವಾಗಿ ಸಿದ್ದಾಪುರಕ್ಕೆ ಹೊರಟಿದ್ದರು. ಮನೆ ರಸ್ತೆಯಿಂದ ಮುಖ್ಯ ರಸ್ತೆ ಕ್ರಾಸ್‌ ಆಗುತ್ತಿದ್ದಂತೆ ಎದುರು ಕಡೆಯಿಂದ ಅತೀ ವೇಗವಾಗಿ ಬಂದ್‌ ಬುಲೆಟ್‌ ಬೈಕ್‌ ಢಿಕ್ಕಿ ಹೊಡೆದಿದೆ. ಭಾಸ್ಕರ ಶೆಟ್ಟಿ ಅವರು ಹೆಲ್ಮೆಟ್‌ ಧರಿಸಿದ್ದರೂ, ಅಪಘಾತದಲ್ಲಿ ಹೆಲ್ಮೆಟ್‌ಸಂಪೂರ್ಣ ಒಡೆದು ಹೋಗಿದೆ. ತಲೆ ರಸ್ತೆಗೆ ತಾಗಿ ತಲೆ ಒಡೆದು, ರಕ್ತಸ್ರಾವವಾಗಿ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಮೃತರು  ಓರ್ವ ಪುತ್ರಿ  ಪತ್ನಿಯನ್ನು ಅಗಲಿದ್ದಾರೆ.

ಸ್ಥಳೀಯರಾದ ಸಂಜೀವ ಮೊಗವೀರ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next