Advertisement

ಬುಲಂದ್‌ಶಹರ್‌: ಎಸ್‌ಐ ಹತ್ಯೆ ಆರೋಪಿ BJP ಯುವ ಮೋರ್ಚಾ ನಾಯಕ ಅರೆಸ್ಟ್‌

05:38 AM Jan 10, 2019 | Team Udayavani |

ಹೊಸದಿಲ್ಲಿ : ಉತ್ತರ ಪ್ರದೇಶದ ಬುಲಂದ್‌ ಶಹರ್‌ ಹಿಂಸೆಯಲ್ಲಿ ನಡೆದಿದ್ದ ಪೊಲೀಸ್‌ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್‌ ಅಗರ್‌ವಾಲ್‌ ಎಂಬಾತನನ್ನು ಪೊಲೀಸರು ಉತ್ತರ ಪ್ರದೇಶದ ಹಾಪುರ್‌ ನಲ್ಲಿ ಇಂದು ಗುರುವಾರ ನಸುಕಿನ ವೇಳೆಯಲ್ಲಿ ಬಂಧಿಸಿದ್ದಾರೆ. 

Advertisement

ಗೋಹತ್ಯೆಗೆ ಸಂಬಂಧಿಸಿ ಬುಲಂದ್‌ಶಹರ್‌ನಲ್ಲಿ  ಕಳೆದ ವರ್ಷ ಡಿ.3ರಂದು ಭುಗಿಲೆದ್ದಿದ್ದ ಹಿಂಸೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ ಮತ್ತು ಸುಮಿತ್‌ ಕುಮಾರ್‌ ಎಂಬ ತರುಣನನ್ನು ಉದ್ರಿಕ್ತ ಜನಸಮೂಹ ಚಚ್ಚಿ ಕೊಂದಿತ್ತು. ಇದಕ್ಕೆ ಶಿಖರ್‌ ಅಗರ್‌ವಾಲ್‌ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ.

ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿರುವ  ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್‌ ಅಗರ್‌ವಾಲ್‌ ನನ್ನು ಇಂದು ನಸುಕಿನ ವೇಳೆ ಬಂಧಿಸಲಾಗಿದ್ದು ಆತನನ್ನು  ಪ್ರಶ್ನಿಸಿದ ಬಳಿಕ ಇಂದು ಸಂಜೆಯ ವೇಳೆಗೆ ಕೋರ್ಟಿನಲ್ಲಿ  ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ (ಬುಲಂದ್‌ಶಹರ್‌ ನಗರ) ಅತುಲ್‌ ಕುಮಾರ್‌ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next