Advertisement

ಬುದ್ಧ-ಬಸವ ಓಡಿಸಿದವರ ಮತ ರಮೇಶಗೆ: ಸತೀಶ

11:19 PM Dec 15, 2019 | Lakshmi GovindaRaj |

ಗೋಕಾಕ: ಬುದ್ಧ, ಬಸವ, ಅಂಬೇಡ್ಕರ್‌ ಪರವಾಗಿರುವವರು ನಮಗೆ ಮತ ಚಲಾಯಿಸಿದ್ದಾರೆ. ಬುದ್ಧ ಮತ್ತು ಬಸವೇಶ್ವರ ಅವರನ್ನು ದೇಶ ಬಿಟ್ಟು ಓಡಿಸಿದವರು ರಮೇಶಗೆ ಮತ ಹಾಕಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಡಿಸಿಎಂ ಮತ್ತು ಸಚಿವ ಸ್ಥಾನಕ್ಕೆ ಈಗಾಗಲೇ ಬೆಂಗಳೂರಿನಲ್ಲಿ ಲಾಬಿ ನಡೆದಿದ್ದು, ರಮೇಶ ಅವರು ಸಿದ್ದರಾಮಯ್ಯ ಜೊತೆ ದೋಸ್ತಿ ಇದೆ ಅಂತಾ ತೋರಿಸಲು ಆಸ್ಪತ್ರೆಗೆ ಭೇಟಿ ನೀಡಿ ಬ್ಲ್ಯಾಕ್‌ವೆುಲ್‌ ಮಾಡುತ್ತಿದ್ದಾರೆ.

Advertisement

ಅಲ್ಲದೇ ಕುಮಾರಸ್ವಾಮಿ ಅವರನ್ನು ರಮೇಶ ಭೇಟಿಯಾಗುತ್ತಾನೆ. ಮಂತ್ರಿಯಾದ ಮೇಲೆ ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಬಾರದೆಂದು ವಿರೋಧ ಪಕ್ಷದವರನ್ನು ಭೇಟಿ ಮಾಡುತ್ತಾನೆ. ಬಿಜೆಪಿಯಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ವೆುಲ್‌ ಮಾಡುತ್ತಾನೆ. ಯಡಿಯೂರಪ್ಪನವರೇ ಇವನನ್ನು ಹೊರ ಹಾಕುತ್ತಾರೋ ಅಥವಾ ಅವರನ್ನು ಈತ ಹೊರ ಹಾಕುತ್ತಾನೋ ಕಾದು ನೊಡಬೇಕು ಎಂದು ಏಕವಚನದಲ್ಲಿ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next