Advertisement

ಮಂತ್ರಾಲಯಕ್ಕೆ ಬಿಎಸ್‌ವೈ ಭೇಟಿ 

10:27 PM Aug 11, 2022 | Team Udayavani |

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನ ಮಹೋತ್ಸವ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಅವರು ಗುರುವಾರ ಕುಟುಂಬ ಸಮೇತ ಭೇಟಿ ನೀಡಿದರು.

Advertisement

ಪುತ್ರರಾದ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸೊಸೆಯಂದಿರ ಜತೆ ಬುಧವಾರ ರಾತ್ರಿಯೇ ಆಗಮಿಸಿದ ಅವರು, ರಾತ್ರಿ ಅಲ್ಲಿಯೇ ತಂಗಿ ಗುರುವಾರ ಬೆಳಗ್ಗೆ ದರ್ಶನ ಪಡೆದರು. ಮೊದಲಿಗೆ ಗ್ರಾಮದೇವತೆ ಶ್ರೀ ಮಂಚಾಲಮ್ಮ ದೇವಿಯ ದರ್ಶನ ಪಡೆದು ಬಳಿಕ ಶ್ರೀರಾಯರ ಮೂಲ ಬೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಮಠದಿಂದ ಯಡಿ ಯೂರಪ್ಪ ಅವರನ್ನು ಸಮ್ಮಾನಿಸ ಲಾಯಿತು. ಬಳಿಕ ಶ್ರೀಮಠದಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು  ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರ ಜತೆ ಯಡಿಯೂರಪ್ಪ  ವೀಕ್ಷಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next