Advertisement

ಬಿಎಸ್‌ವೈ “ತೀನ್‌ ದಿನ್‌ ಕಾ ನಾಯಕ’: ಸಿದ್ದು

06:51 AM May 15, 2019 | Team Udayavani |

ಹುಬ್ಬಳ್ಳಿ: ಕಳೆದ ಚುನಾವಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಯಡಿಯೂರಪ್ಪನವರು “ತೀನ್‌ ದಿನ್‌ ಕಾ ನಾಯಕ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

ವರೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಇದೀಗ ಹೆಚ್ಚು ಶಾಸಕರನ್ನು ಹೊಂದಿದ ಪಕ್ಷ ನಮಗೆ ಅಧಿಕಾರ ನೀಡುತ್ತಿಲ್ಲ ಎಂದು ನಾಚಿಕೆಯಿಲ್ಲದೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮೂರು ಕಾಸಿನ ಮರ್ಯಾದೆಯಿಲ್ಲದ ಬಿಜೆಪಿ ನಾಯಕರು ವಾಮಮಾರ್ಗದಿಂದ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಮಾಡುತ್ತಿರುವ ತಂತ್ರಗಾರಿಕೆ ಯಶಸ್ವಿಯಾಗಲು ಸಾಧ್ಯವಿಲ್ಲ.

ಮಾಜಿ ಸಚಿವ ದಿ| ಸಿ.ಎಸ್‌.ಶಿವಳ್ಳಿ ಅವರಿಗೆ 25 ಕೋಟಿ ರೂ.ನೀಡಲು ಬಿಜೆಪಿ ನಾಯಕರು ಒತ್ತಡ ಹಾಕಿ ವಿಧಾಸೌಧದ ಶಾಸಕರ ಭವನದಲ್ಲಿ 5 ಕೋಟಿ ರೂ.ನೀಡಲು ಹೋಗಿದ್ದರು. ನಾನು ಲಂಡನ್‌ನಲ್ಲಿದ್ದೆ. ಆಗ ಶಿವಳ್ಳಿ ನನಗೆ ಕರೆ ಮಾಡಿ ವಿಷಯ ತಿಳಿಸಿದರು.

ಸರ್‌ ಇವರನ್ನು ಹಿಡಿಸಲಾ ಎಂದು ಕೇಳಿದ್ದರು. ಹೋಗಲಿ ಬಿಡಪ್ಪಾ, ಉಗುದು ಹೊರಗಟ್ಟು ಎಂದು ಹೇಳಿದ್ದೆ. ದುಡ್ಡು ಕೊಡಲು ಹೋದವರಿಗೆ ತಕ್ಕ ಶಾಸ್ತಿ ಮಾಡಿ ಆಚೆ ಅಟ್ಟಿದ್ದರು. ಈ ಮೂಲಕ ಶಿವಳ್ಳಿ ಪಕ್ಷದ ನಿಷ್ಠೆ ಹಾಗೂ ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ತಲೆ ಬಾಗಿದ್ದರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next