Advertisement

ಬಿಎಸ್‌ವೈರಿಂದ ಸೇಡಿನ ರಾಜಕಾರಣ: ಬೆಳಮಗಿ

11:14 PM Apr 13, 2019 | Team Udayavani |

ಶಿವಮೊಗ್ಗ: ಕೆಜೆಪಿ ಕಟ್ಟಿದಾಗ ಪಕ್ಷಕ್ಕೆ ಸೇರಿಲ್ಲವೆಂಬ ಕಾರಣಕ್ಕೆ ಹಾಗೂ ಬಂಜಾರ ಸಮುದಾಯ ನಿರ್ನಾಮ ಮಾಡುವ ಉದ್ದೇಶದಿಂದ ಬಿ.ಎಸ್‌.ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡಿದರು ಎಂದು ಮಾಜಿ ಸಚಿವ, ಜೆಡಿಎಸ್‌ ನಾಯಕ ರೇವೂನಾಯಕ ಬೆಳಮಗಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನನ್ನ ಅಣ್ಣನ ಸಮಾನರಾಗಿದ್ದರು. ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ, ಯಾವುದೇ ತಪ್ಪು ಮಾಡದಿದ್ದರೂ ಬಿಜೆಪಿಯಿಂದ ಟಿಕೆಟ್‌ ತಪ್ಪಿಸಲಾಯಿತು.

ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂಬ ಉದ್ದೇಶದಿಂದ ಬಾಬುರಾವ್‌ ಚವ್ಹಾಣ್‌ ಅವರನ್ನು ಮುನ್ನೆಲೆಗೆ ತರಲಾಗಿತ್ತು ಎಂದು ಆಪಾದಿಸಿದರು. ಸಮಾಜದ ಕೆಳಸ್ತರದಲ್ಲಿರುವ ಬಂಜಾರಾ ಸಮುದಾಯವನ್ನು ನಿರ್ನಾಮ ಮಾಡುವ ಉದ್ದೇಶದಿಂದಲೇ ನನಗೆ ಟಿಕೆಟ್‌ ತಪ್ಪಿಸಲಾಗಿತ್ತು. ಆಗ ನನಗೆ ಟಿಕೆಟ್‌ ನೀಡದಿರಲು ಕಾರಣವೇನು?

ಅದಕ್ಕೆ ಅನುಸರಿಸಿರುವ ಮಾನದಂಡಗಳನ್ನು ಯಡಿಯೂರಪ್ಪನವರು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು. ಈಗ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಉಮೇಶ್‌ ಜಾಧವ್‌ ಅವರನ್ನು ಕರೆತರಲಾಗಿದೆ. ಅವರ ರಾಜಕೀಯ ಭವಿಷ್ಯವೂ ಹಾಳಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next