Advertisement

BSY ಹಣದ ಆಮಿಷ ಒಡ್ಡಿಲ್ಲ: ಶಾಮನೂರು ಶಿವಶಂಕರಪ್ಪ

12:33 AM Mar 12, 2024 | Team Udayavani |

ದಾವಣಗೆರೆ: ರಾಜ್ಯಸಭೆ ಚುನಾವಣೆ ಸಂದರ್ಭ ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಕೇಳಿದ್ದೇನೋ ನಿಜ. ಆದರೆ ಯಾರೂ ಸಹ ಹಣದ ಬಗ್ಗೆ ಮಾತನಾಡಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಚುನಾವಣೆ ವೇಳೆ ಯಾರು ಬೇಕಾದರೂ ಮತ ಕೇಳಬಹುದು. ನನ್ನ ಮತ ಕೊಡಲ್ಲ, ಎಷ್ಟು ಬೇಕಾದರೂ ದುಡ್ಡು ಕೊಡ್ತೀನಿ ಅಂತಾ ಹೇಳಿದ್ದೆ. ಬಿಜೆಪಿ ಯವರ ಬಳಿ ಸಾಕಷ್ಟು ದುಡ್ಡಂತೂ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ನನಗೆ ಮತ ಕೇಳಿದ್ದು ನಿಜ. ಆದರೆ 50 ಕೋಟಿ ರೂ. ಆಮಿಷ ಎನ್ನುವುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

ನನಗೆ 50 ಕೋಟಿ ರೂ. ಆಮಿಷವನ್ನು ತೋರಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರೆ ಅದು ಸುಳ್ಳು. ನನಗೆ ಮತ ಕೇಳಿದ್ದಂತೂ ನಿಜ. ಒಂದು ವೇಳೆ 50 ಕೋಟಿ ರೂ. ಆಮಿಷವೊಡಿದ್ದರು ಎಂದು ಹೇಳಿದ್ದರೆ ಆ ಬಗ್ಗೆ ಅವರನ್ನೇ ಕೇಳಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next