Advertisement

ಏನೇ ಬಂದರೂ ಯಡಿಯೂರಪ್ಪ ಜನಪರ ಕೆಲಸ ನಿಲ್ಲಿಸಿಲ್ಲ: ಆರ್.ಅಶೋಕ್

10:24 AM Jul 25, 2021 | Team Udayavani |

ಬೆಂಗಳೂರು: ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ರೈತಪರ ಹೋರಾಟ ಮಾಡಿದವರು ಅವರು. ಹಗಲು ರಾತ್ರಿ ಜನರ, ರೈತರ ಪರ ಕೆಲಸ ಮಾಡಿದ್ದಾರೆ. ಹೋರಾಟದಿಂದಲೇ ಯಡಿಯೂರಪ್ಪ ಬಂದವರು ಎಂದು ಕಂದಾಯ ಸಚಿವ ಆರ್.ಅಶೋಕ್ ಶ್ಲಾಘಿಸಿದ್ದಾರೆ.

Advertisement

ರಾಜೀನಾಮೆ ಸನ್ನಿಹಿತವಾಗಿದ್ದರೂ ಸಿಎಂ ಕರ್ತವ್ಯ ನಿಷ್ಠೆ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಮೈಯಲ್ಲಿ ರಕ್ತ ಇರುವವರೆಗೂ ಜನರ ಪರ ಕೆಲಸ ಮಾಡುವವರು. ಜನರ ಪರ ನಿಲ್ಲುವುದು ಯಡಿಯೂರಪ್ಪನವರಿಗೆ ರಕ್ತಗತವಾಗಿ ಬಂದಿದೆ. ಏನೇ ಬಂದರೂ ಯಡಿಯೂರಪ್ಪ ನಿತ್ಯದ ಜನಪರ ಕೆಲಸ ಮಾಡುವುದನ್ನು ನಿಲ್ಲಿಸಲ್ಲ.ಅದಕ್ಕೆ ಅವರನ್ನು ಜನನಾಯಕ ಎನ್ನುವುದು ಎಂದರು.

ಇದನ್ನೂ ಓದಿ:ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಚೆಲ್ಲಿದ ಶಾಸಕ ಅಭಯ ಪಾಟೀಲ್

ನೆರೆ ವೀಕ್ಷಣೆಗೆ ಸಿಎಂ: ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲು ಸಿಎಂ ಯಡಿಯೂರಪ್ಪ ತೆರಳಿದರು. ಸಿಎಂ ಜೊತೆಯಲ್ಲಿ ಸಚಿವ ಆರ್ ಅಶೋಕ್ ಕೂಡ ಪ್ರಯಾಣ ಬೆಳೆಸಿದರು. ಆದರೆ ಈ ವೇಳೆ ಯಾವುದೇ ಪ್ರತಿಕ್ರಿಯೆ ಕೊಡದೆ ಸಿಎಂ ತೆರಳಿದರು.

ಇವತ್ತಿನ ಹೈಕಮಾಂಡ್ ಸಂದೇಶದ ಬಗ್ಗೆ ಮಾತನಾಡಿದ ಆರ್.ಅಶೋಕ್, ಹೈಕಮಾಂಡ್ ನಿಂದ ಸಂದೇಶ ಬರುವ ಬಗ್ಗೆ ಗೊತ್ತಿಲ್ಲ. ನಮ್ಮ ದೃಷ್ಟಿ ಜನರ ಕಷ್ಟ ದೂರ ಮಾಡುವುದು. ಕೇಂದ್ರದ ನಿರ್ಧಾರದ ಗಮನ ನನಗಿಲ್ಲ. ಇದರ ಬಗ್ಗೆ ಸಿಎಂ ಗೆ ನೀವು ಕೇಳಬೇಕು. ನಮ್ಮ ಗಮನ ಪರಿಹಾರ ಕ್ರಮಗಳತ್ತ ಮಾತ್ರ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next