Advertisement

ಬಿಎಸ್‌ಪಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ

03:53 PM Nov 18, 2021 | Team Udayavani |

ಮಾನ್ವಿ: ಬಿಎಸ್‌ಪಿ ಪಕ್ಷದ ಸಿದ್ಧಾಂತ, ತತ್ವ ಆದರ್ಶಗಳು ಹಾಗೂ ಮಾಯಾವತಿಯವರು ನೀಡಿದ ಉತ್ತಮ ಆಡಳಿತವನ್ನು ವಿವರಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಜನ ಸಮಾಜ ಪಕ್ಷದ ವತಿಯಿಂದ ಜಿಲ್ಲೆಯಲ್ಲಿನ ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ 200 ಜನರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ನ.16ರಿಂದ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ. ಮಾನ್ಯವಾರ್‌ ಕಾನ್ಸಿರಾಮ್‌ ಪರಿನಿರ್ವಾಣ ದಿನವನ್ನು ಕಾನ್ಸಿರಾಂ ನಡಿಗೆ ಯುವಕರ ಕಡೆಗೆ ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಯುವಕರನ್ನು ಪಕ್ಷಕ್ಕೆ ಕರೆತಂದು ಸಮಾಜದ ಪರಿವರ್ತನೆಗಾಗಿ ನಿರಂತರ ಪಕ್ಷವನ್ನು ಸಂಘಟಿಸಲು ಪಕ್ಷದ ಕಾರ್ಯಕರ್ತರು, ಪದಾ ಧಿಕಾರಿಗಳು ಸಕ್ರಿಯವಾಗಿ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳುವಂತೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಶ್ಯಾಮಸುಂದರ ಕಂಬ್ದಾಳ, ತಾ. ಅಧ್ಯಕ್ಷ ರಮೇಶ ನಾಯಕ, ಪ್ರ. ಕಾರ್ಯದರ್ಶಿ ಚಂದ್ರಶೇಖರ, ವಿರುಪಾಕ್ಷಿ, ಚನ್ನಬಸವ ಜಗಲಿ, ಇಮಾಮ್‌ ಸಾಬ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next