Advertisement

ಶಹಾಪುರಕ್ಕೆ ಇಂದು ಬಿಎಸ್‌ವೈ

04:41 PM Dec 11, 2017 | Team Udayavani |

ಶಹಾಪುರ: ಪರಿವರ್ತನಾ ಯಾತ್ರೆ ನಿಮಿತ್ತ ನಗರಕ್ಕೆ ಡಿ. 11 ರಂದು ಮಧ್ಯಾಹ್ನ 3:00 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಮತ್ತು ರಾಜ್ಯ, ರಾಷ್ಟ್ರ ನಾಯಕರು ಆಗಮಿಸಲಿದ್ದು, ನಗರದೆಲ್ಲೆಡೇ ಕಮಲ ಅರಳುವ ಕಟೌಟ್‌ಗಳು ರಾರಾಜಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ಮೂಡಿದೆ.

Advertisement

ಶಾಸಕ ಗುರು ಪಾಟೀಲರ ಅಸಂಖ್ಯೆ ಅಭಿಮಾನಿಗಳು, ಯುವ ಕಾರ್ಯಕರ್ತರು ಕಳೆದ ಹದಿನೈದು ದಿನಗಳಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಶಾಸಕ ಗುರು ಪಾಟೀಲ ಶಿರವಾಳರ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಶಹಾಪುರ ಮತಕ್ಷೇತ್ರದಲ್ಲಿ ಕಮಲ ಅರಳಿಸಲು ಕಾರ್ಯ ಪಡೆಸಜ್ಜಾಗಿದೆ.

ಯುವ ಬಿಜೆಪಿ ಕಾರ್ಯಕರ್ತರು ಬೈಕ್‌ರ್ಯಾಲಿ ಮುಖಾಂತರ ಪರಿವರ್ತನಾ ರ್ಯಾಲಿಗೆ ಸ್ವಾಗತಿಸಲಿದ್ದಾರೆ. ವಾಹನ
ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಿ.ಪಿ.ಎಸ್‌. ಶಾಲಾ ಮೈದಾನದಲ್ಲಿ ವ್ಯವಸ್ಥಿತವಾದ ವೇದಿಕೆ ಸಜ್ಜುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next