Advertisement

ಬಾಂಗ್ಲಾ ಯೋಧರ ಗುಂಡಿನಿಂದಲೇ ಯೋಧ ಸಾವು: ಬಿಎಸ್‌ಎಫ್

09:36 AM Oct 24, 2019 | Team Udayavani |

ಕೋಲ್ಕತಾ: ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ (ಬಿಜಿಬಿ) ಯೋಧ ಅಪ್ರಚೋದಿತವಾಗಿ ಗುಂಡು ಹಾರಿಸಿದ್ದೇ ಯೋಧನ ಸಾವಿಗೆ ಕಾರಣ ಎಂದು ಬಿಎಸ್‌ಎಫ್ ತನ್ನ ವರದಿಯಲ್ಲಿ ಹೇಳಿದೆ. ಇದರ ಹೊರತಾಗಿ ಬೇರೆ ಯಾವುದೇ ಕಾರಣಗಳು ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

Advertisement

ಅ. 17ರಂದು ಮುರ್ಷಿದಾಬಾದ್‌ ಜಿಲ್ಲೆಯಲ್ಲಿ 2 ದೇಶಗಳ ಪಡೆಗಳ ನಡುವೆ ಅಂತಾ ರಾಷ್ಟ್ರೀಯ ಗಡಿಯಲ್ಲಿ ಸಭೆ ನಡೆಯುತ್ತಿದ್ದ ವೇಳೆ ಬಿಜಿಬಿ ಯೋಧ ಗುಂಡು ಹಾರಿಸಿದ್ದರಿಂದ ಬಿಎಸ್‌ಎಫ್ ಯೋಧ ಅಸುನೀಗಿದ್ದರು.

ಭಾರತದ ಯೋಧ ನಿಯಮ ಮೀರಿ ಗಡಿಯೊಳಕ್ಕೆ ಬಂದ ಕಾರಣ ಗುಂಡು ಹಾರಿಸಬೇಕಾಯಿತು ಎಂದು ಬಾಂಗ್ಲಾದೇಶ ಹೇಳಿತ್ತು. ಈ ಬಗ್ಗೆ ನೆರೆಯ ರಾಷ್ಟ್ರದ ಪಡೆ ನೀಡಿರುವ ಸ್ಪಷ್ಟನೆ ಒಪ್ಪಲು ಸಾಧ್ಯವಿಲ್ಲ ಎಂದು ಬಿಎಸ್‌ಎಫ್ ಹೇಳಿದೆ. ಈ ಮೂಲಕ ಅದು ತನ್ನ ಕೃತ್ಯ ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next