Advertisement

SriGanganagar; ಗಡಿ ನುಸುಳಿದ ಪಾಕಿಸ್ಥಾನಿ ನುಸುಳುಕೋರನ ಹತ್ಯೆಗೈದ ಬಿಎಸ್ ಎಫ್

04:02 PM Mar 08, 2024 | Team Udayavani |

ಶ್ರೀಗಂಗಾನಗರ(ರಾಜಸ್ಥಾನ): ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ಥಾನಿ ಒಳನುಸುಳುಕೋರರನ್ನು ಬಿಎಸ್ ಎಫ್ ಪದೇ ಗುಂಡಿಕ್ಕಿ ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ.

Advertisement

ಗಡಿಯಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬಂದಿ ಮಧ್ಯರಾತ್ರಿ 12.30 ರ ಸುಮಾರಿಗೆ ಗಡಿ ಬೇಲಿಗಿಂತ ಮುಂದಕ್ಕೆ ಸುಂದರಪುರ ಪ್ರದೇಶದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ನುಸುಳುಕೋರನನ್ನು ಗುರುತಿಸಿದ್ದಾರೆ. ತತ್ ಕ್ಷಣವೇ ಅವನಿಗೆ ಸವಾಲು ಹಾಕಿದ್ದು, ಆದರೆ ಆತ ಬೇಲಿಯ ಕಡೆಗೆ ಮುಂದುವರಿದಿದ್ದು ಬಳಿಕ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಕಾನೂನು ಪ್ರೋಟೋಕಾಲ್ ಪ್ರಕಾರ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next