Advertisement

ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು

09:01 PM Jan 27, 2022 | Team Udayavani |

ಕುಂದಾಪುರ: ಸಂಪ್ರದಾಯದ ನೆನಪಿಗಾಗಿ ಮದುಮ ಗಳನ್ನು ಜೋಡೆತ್ತಿನ ಗಾಡಿಯಲ್ಲಿ ಕರೆತಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಕಟ್ಟಿನಮಕ್ಕಿ ಬವಳಾಡಿ ಮಹಾಬಲ ಆಚಾರ್ಯ ಅವರ ಪುತ್ರಿ ಪ್ರತಿಮಾ ಹಾಗೂ ಕಟ್‌ಬೆಲೂ¤ರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್‌ ಅವರ ವಿವಾಹ ಜ.26ರಂದು ಕಿರಿಮಂಜೇಶ್ವರದ ಅರೆಹೊಳೆ ಕ್ರಾಸ್‌ನ ಮಾಂಗಲ್ಯ ಆರ್ಕೆಡ್‌ನ‌ ಚಿನ್ಮಯಿ ಸಭಾಭವನದಲ್ಲಿ ನಡೆದಿದೆ.

ಕಟ್ಟಿನಮಕ್ಕಿ ಬವಳಾಡಿಯ ಮಹಾಬಲ ಆಚಾರ್ಯ ಅವರು ಪುತ್ರಿಯ ದಿಬ್ಬಣವನ್ನು ಮದುವೆ ಮಂಟಪಕ್ಕೆ ಅವರು ಕರೆತರಲು ಬೈಂದೂರಿನ ಸೀತಾರಾಮ ಶೆಟ್ಟಿ ಅವರ ಎತ್ತಿನಗಾಡಿಯನ್ನು ನಿಗದಿಪಡಿಸಿದರು.

ಕಿರಿಮಂಜೇಶ್ವರವರೆಗೆ ಕಾರಿನಲ್ಲಿ ಬಂದು ಅಲ್ಲಿಂದ ಜೋಡೆತ್ತಿನ ಗಾಡಿ ಯಲ್ಲಿ  ಮದುಮಗಳು ಸಾಗಿ ಬಂದಳು. ದಾರಿಯುದ್ದಕ್ಕೂ ಸಾರ್ವಜನಿಕರು ಈ ಸಂಭ್ರಮವನ್ನು ಕಣ್ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next