Advertisement

ಕೃಷಿ ಸಾಲ ಮಂಜೂರಾತಿಗೆ ಲಂಚ: ಬ್ಯಾಂಕ್‌ ಮ್ಯಾನೇಜರ್‌ಗೆ ಜೈಲು ಶಿಕ್ಷೆ

11:14 PM Dec 07, 2022 | Team Udayavani |

ಬೆಂಗಳೂರು: ಕೃಷಿ ಸಾಲ ಮಂಜೂರು ಮಾಡಲು ಇಬ್ಬರು ಕೃಷಿಕರಿಂದ ಲಂಚಕ್ಕೆ ಬೇಡಿಕೆ ಇಟ್ಟ ಬ್ಯಾಂಕ್‌ ಮ್ಯಾನೇಜರ್‌ಗೆ ನಗರದ 48ನೇ ಸಿಬಿಐ ವಿಶೇಷ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ.

Advertisement

ಚೋಳೂರು ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಶಾಖಾಧಿಕಾರಿ ಶ್ರೀಧರ್‌ ಶಿಕ್ಷೆಗೊಳಗಾದ ಬ್ಯಾಂಕ್‌ ಮ್ಯಾನೇಜರ್‌. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲೂಕಿನ ಚೋಳೂರು ಗ್ರಾಮದ ಸಿ.ವಿ. ರವಿ ಎಂಬ ಕೃಷಿಕ 1 ಲಕ್ಷ ರೂ. ಹಾಗೂ ಆತನ ಸ್ನೇಹಿತ ನಾರಾಯಣ ರೆಡ್ಡಿ 40 ಸಾವಿರ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬ್ಯಾಂಕ್‌ ಮ್ಯಾನೇಜರ್‌ ಶ್ರೀಧರ್‌ ಸಾಲ ಮಂಜೂರು ಮಾಡಲು 7,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ಈ ಬಗ್ಗೆ ರವಿ ಚಿಕ್ಕಬಳ್ಳಾಪುರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಜತೆಗೆ ಲಂಚಕ್ಕೆ ಬೇಡಿಕೆ ಇಟ್ಟ ಆಡಿಯೋ ಸಾಕ್ಷ್ಯ ಕೂಡ ಲಗತ್ತಿಸಿದ್ದರು. ಬಳಿಕ ಲೋಕಾಯುಕ್ತ ಪೊಲೀಸರು, ದೂರುದಾರ ರವಿಯಿಂದ ಆರೋಪಿ ಹಣ ಪಡೆಯುವಾಗ ದಾಳಿ ನಡೆಸಿ ಬಂಧಿಸಿದ್ದರು. ಇದೇ ವೇಳೆ ಆರೋಪಿ ಬಳಿಯಿದ್ದ ನಿರ್ದಿಷ್ಟ ಠೇವಣಿ ರಶೀದಿ ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಿಬಿಐ ಪರ ಸರಕಾರಿ ಅಭಿಯೋಜಕ ಶಿವಾನಂದ ಪಿರ್ಲೆ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next