Advertisement

ಮಹಾರಾಷ್ಟ್ರ: ಉದ್ಧವ್‌ ಬಣದ ಬೆಂಬಲಿಗರ ಕಾಲು ಕತ್ತರಿಸಲು ಕರೆ!

07:48 PM Aug 16, 2022 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣದ ಕಿತ್ತಾಟದ ಬೆನ್ನಲ್ಲೇ, ಶಿಂಧೆ ಬಣದ ನಾಯಕರೊಬ್ಬರು, ಉದ್ಧವ್‌ ಬಣದ ಬೆಂಬಲಿಗರ ಕಾಲು ಕತ್ತರಿಸಿ ಎಂದು ಹೇಳಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಶಿಂಧೆ ಬಣದ ಶಾಸಕ ಪ್ರಕಾಶ್‌ ಸುರ್ವೆ ತಮ್ಮ ಕಾರ್ಯಕರ್ತರ ಎದುರು, “ನಮ್ಮನ್ನು ಅವರು ಕೆಣಕುತ್ತಿದ್ದರೆ ನಾವು ಸುಮ್ಮನೆ ಕೂರಬಾರದು. ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ ಕಾಲು ಮುರಿಯಿರಿ. ನಿಮಗೆ ಯಾವುದೇ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ಜಾಮೀನು ಕೊಡಿಸುತ್ತೇನೆ’ ಎಂದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಉದ್ಧವ್‌ ಬಣದ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next