Advertisement
ಅನ್ನದಾತರ ಹಿತ ಕಾಯಬೇಕಿದ್ದ ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರ ಕಾರ್ಯವೈಖರಿಗೆ ವ್ಯಾಪಾರಸ್ಥರು, ಗ್ರಾಹಕರು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಈ ವಾರ ಸಂತೆ ಮುಖ್ಯ ರಸ್ತೆಗೆ ಬಂದಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಹುನ್ನೂರು ಗ್ರಾಮದ ಮುಖ್ಯರಸ್ತೆಯಲ್ಲಿ ನಡೆಯುತ್ತಿದ್ದ ಸಂತೆಯಿಂದಾಗಿ ಕೃಷಿಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಮುಖ್ಯವಾಗಿ ಸಂಚಾರ ಸಮಸ್ಯೆ ತಲೆದೋರಿತ್ತು. ವಾಹನಗಳ ಸಂಚಾರದಿಂದ ಮೇಲೇಳುತ್ತಿದ್ದ ಧೂಳು ತರಕಾರಿ, ಕಾಯಪಲ್ಲೆ ಮೇಲೆ ಬಿದ್ದು ಜನರ ಆರೋಗ್ಯ ಮೇಲೂ ಪರಿಣಾಮ ಬೀರುತ್ತಿತ್ತು. ಹುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಪಾಳುಬಿದ್ದು ನಿರುಪಯುಕ್ತವಾಗಿದ್ದ ಸರ್ಕಾರಿ ಜಾಗಕ್ಕೆ ಸಂತೆ ಸ್ಥಳಾಂತರಿಸಿ ಹಲವಾರು ವಾರಗಳಿಂದ ತರಕಾರಿ, ಕಾಯಿಪಲ್ಲೆ ಮಾರುಕಟ್ಟೆಗೆ ಅವಕಾಶ ನೀಡಲಾಗಿತ್ತು.
Advertisement
ಪಾಳು ಬಿದ್ದ ಜಾಗದಲ್ಲಿ ಸಂತೆಗೆ ಬ್ರೇಕ್
03:02 PM Jan 17, 2020 | Suhan S |