Advertisement

Brahmavara: ಎಂಟನೇ ತರಗತಿ ವಿದ್ಯಾರ್ಥಿ ಮದರಸ ಹಾಸ್ಟೆಲ್‌ ನಲ್ಲಿ ನೇಣು ಬಿಗಿದು ಆತ್ಮಹ*ತ್ಯೆ

07:56 PM Oct 13, 2024 | Team Udayavani |

ಬ್ರಹ್ಮಾವರ: ರಂಗನಕೆರೆ ಮದರಸ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಹೇರಾಡಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಾರಂಬಳ್ಳಿ ಗ್ರಾಮದ ಮೊಹಮ್ಮದ್‌ ಜಹೀದ (12) ಶನಿವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ರಜೆ ಮುಗಿಸಿ ಶುಕ್ರವಾರವಷ್ಟೇ ಹಾಸ್ಟೆಲ್‌ಗೆ ತೆರಳಿದ್ದು, ಶನಿವಾರ ರಾತ್ರಿ ಮೊಹಮ್ಮದ್‌ ಜಹೀದ ಹಾಗೂ ಇತರ ವಿದ್ಯಾರ್ಥಿಗಳೊಂದಿಗೆ ಸಣ್ಣ ಜಗಳವಾಗಿತ್ತು ಎನ್ನಲಾಗಿದೆ.

ಮದರಸ ಗುರುಗಳಿಗೆ ವಿಚಾರ ತಿಳಿಸಿ ಉಳಿದವರು ಊಟಕ್ಕೆ ತೆರಳಿದ್ದರು. ಮೊಹಮ್ಮದ್‌ ಜಹೀದ ಊಟಕ್ಕೆ ಬಾರದಿರುವುದನ್ನು ಗಮನಿಸಿ ಹುಡುಕಾಡಿದಾಗ ಬಾತ್‌ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿರುವುದು ತಿಳಿದು ಬಂದಿತು.

ಗುರುಗಳು ಬಯ್ಯಬಹುದು ಎನ್ನುವ ಭಯವೂ ಆತ್ಮಹತ್ಯೆಗೆ ಕಾರಣ ಇದ್ದಿರಬಹುದು. ಬಾಲಕನಿಗೆ ಹಾಸ್ಟೆಲ್‌ಗೆ ಹೋಗಲು ಅಷ್ಟೊಂದು ಮನಸ್ಸು ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next